ಮಂಗಳೂರು,ಫೆ 08 (DaijiworldNews/HR): ಮೆಲ್ವಿನ್ ರೊಡ್ರೀಗಸ್ ಸೇರಿದಂತೆ 16 ಮಂದಿಗೆ 2020-2021 ಹಾಗೂ 2021-22ನೇ ಸಾಲಿನ ಸಂದೇಶ ಪ್ರಶಸ್ತಿಯನ್ನು ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವಿಶ್ವಸ್ಥರಾದ ರೋಯ್ ಕ್ಯಾಸ್ಟಲಿನೊ ಅವರು ಪ್ರಕಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಪ್ರಶಸ್ತಿ ಕಾರ್ಯಕ್ರಮವು 2022ರ ಫೆಬ್ರವರಿ 22 ಮಂಗಳವಾರ ಸಂಜೆ 5.30ಕ್ಕೆ ಸಂದೇಶ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ. ಬಳ್ಳಾರಿಯ ಬಿಷಪ್ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಭಾಗವಹಿಸುವರು. ಶಶಿಕುಮಾರ್, ಐಪಿಎಸ್, ಪೊಲೀಸ್ ಆಯುಕ್ತರು, ಮಂಗಳೂರು ಇವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು. ಅತಿಥಿಗಳಾಗಿ ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ, ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ, ಸಂದೇಶದ ಸಂಚಾಲಕ ಫಾ.ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಸಂಸ್ಥೆಯ ಟ್ರಸ್ಟಿಗಳಾದ ಫಾ.ಐವಾನ್ ಪಿಂಟೋ ಮತ್ತು ರಾಯ್ ಕ್ಯಾಸ್ತಲಿನೋ ಆಗಮಿಸಲಿದ್ದಾರೆ.
ಈ ವೇಳೆ ಸಂದೇಶ ಫೌಂಡೇಶನ್ನ ನಿರ್ದೇಶಕರಾದ ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ಮತ್ತು ವ್ಯವಸ್ಥಾಪಕ ಸೈಮನ್ ಡಿಸೋಜ ಉಪಸ್ಥಿತರಿದ್ದರು.
2020-2021ನೇ ಸಾಲಿನ ಪ್ರಶಸ್ತಿ ಪಡೆದವರ ಹೆಸರು:
ಸಂದೇಶ ಸಾಹಿತ್ಯ ಪ್ರಶಸ್ತಿ ( ಕನ್ನಡ) - ಬರಗೂರು ರಾಮಚಂದ್ರಪ್ಪ
ಸಂದೇಶ ಸಾಹಿತ್ಯ ಪ್ರಶಸ್ತಿ ( ಕೊಂಕಣಿ)- ಅಮರ್ ಕೊಂಕಣಿ ( ಅರ್ಧ ವಾರ್ಷಿಕ ಪ್ರಶಸ್ತಿ)
ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು)- ಡಾ.ಸುನಿತಾ ಎಂ ಶೆಟ್ಟಿ
ಸಂದೇಶ ಮಾಧ್ಯಮ ಪ್ರಶಸ್ತಿ ( ಪತ್ರಿಕೋದ್ಯಮ) - ನಾಗೇಶ್ ಹೆಗಡೆ
ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ- ಮೀನ ರೆಬಿಂಬಸ್
ಸಂದೇಶ ಕಲಾ ಪ್ರಶಸ್ತಿ- ಅವಿತಾಸ್ ಎಡೊಲ್ಫಸ್ ಕುಟಿನ್ಹಾ
ಸಂದೇಶ ಶಿಕ್ಷಣ ಪ್ರಶಸ್ತಿ- ಡಾ ಲಕ್ಷ್ಮಣ್ ಸಾಬ್ ಚೌರಿ
ಸಂದೇಶ ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್
2021-22ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ:
ಸಂದೇಶ ಸಾಹಿತ್ಯ ಪ್ರಶಸ್ತಿ ( ಕನ್ನಡ) - ರಹಮತ್ ತರೀಕೆರೆ
ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ)- ಮೆಲ್ವಿನ್ ರೊಡ್ರೀಗಸ್
ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) - ಬಿ ಕೆ ಗಂಗಾಧರ್ ಕಿರೋಡಿಯನ್
ಸಂದೇಶ ಮಾಧ್ಯಮ ಪ್ರಶಸ್ತಿ ( ಪತ್ರಿಕೋದ್ಯಮ)- ಡಾ ಟಿ ಸಿ ಪೂರ್ಣಿಮ
ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ- ಆಲ್ವಿನ್ ನೊರೊನ್ಹ
ಸಂದೇಶ ಕಲಾ ಪ್ರಶಸ್ತಿ- ಕಾಸರಗೋಡ್ ಚಿನ್ನ
ಸಂದೇಶ ಶಿಕ್ಷಣ ಪ್ರಶಯ- ಡಾ.ಪಿ.ಕೆ. ರಾಜಶೇಖರ
ಸಂದೇಶ ವಿಶೇಷ ಪ್ರಶಸ್ತಿ- ಸ. ರಘುನಾಥ್