ಮಂಗಳೂರು, ಫೆ 08 (DaijiworldNews/KP): ಸಮುದ್ರದಲ್ಲಿ ಸಿಗುವ ಅಂಬರ್ಗ್ರೀಸ್ ಎಂಬ ತಿಮಿಂಗಲದ ವಾಂತಿ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸಿದ 6 ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಜಡ್ಕಲ್ ಗ್ರಾಮದ ಮೆಕ್ಕಿಚಾಂಡಿ ಚೇರು ನಿವಾಸದವರದ ಪ್ರಶಂತ್ (24), ಬೆಂಗಳೂರು ನಗರದ ವೇರಭದ್ರ ನಗರದವರಾದ ಸತ್ಯರಾಜ್ (32), ಮಂಗಳೂರಿನ ತೆಂಕೆಡಪದವು ಗ್ರಾಮದ ಪಡ್ಯಾರು ನಿವಾಸದವರದ ರೋಹಿತ್ (27), ಮಂಗಳೂರು ನಗರದ ಅಡ್ಡೂರಿನ ನಂದ್ಯಾ ನಿವಾಸಿ ರಾಜೇಶ್ (37), ಮಂಗಳೂರಿನ ತೆಂಕೆಡಪದವು ಗ್ರಾಮದ ಪದ್ರಂಗಿ ನಿವಾಸಿ ನಾಗರಾಜ್ (31) ಹಾಗೂ ಉಡುಪಿ ತಲೂಕಿನ ಕಾಪು ನಿವಾಸಿ ನಾಗರಾಜ್ (31) ಎಂದು ಗುರುತಿಸಲಾಗಿದೆ.
ಬಂಧಿತರಿಂದ 3,48 ಕೋಟಿ ರೂ ಮೌಲ್ಯದ 3 ಕೆಜಿ 480 ಗ್ರಾಂ ತೂಕದ ಅಂಬರ್ ಗ್ರೀಸ್ನ್ನು ವಶಪಡಿಸಿಕೊಳ್ಳಲಾಗಿದೆ.
ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಯಲ್ಲಿ ಬಳಸುವ ಅಂಬರ್ಗ್ರೀಸ್ಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದ್ದು ಈ ನಿಟ್ಟಿನಲ್ಲಿ ಇವರು ಅಂಬರ್ ಗ್ರೀಸ್ನ್ನು ತಮಿಳುನಾಡು ಮೂಲದ ಮೀನುಗಾರ ಸೇದು ಮಾಣಿಕ್ಯ ಎಂಬುವವರಿಂದ ತೆಗೆದುಕೊಂಡಿರುವುದಾಗಿ ಎಂದು ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ ಶೆಟ್ಟಿ ಮಾಗದರ್ಶದಲ್ಲಿ, ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರ ಮುಂದಾಳತ್ವದಲ್ಲಿ, ಉಪ ನಿರೀಕ್ಷಕರಾದ ಶರಣಪ್ಪ ಭಂಡಾರಿ ಮತ್ತು ಮಲ್ಲಕಾರ್ಜುನ್ ಬಿರಾದಾರ್, ಎ.ಎಸ್. ಐರವರಾದ ಮೋಹನ್ ದೇರಳಕಟ್ಟೆ, ಸಂಜೀವ ಹಾಗೂ ಸಿಬ್ಬಂದಿಗಾಳಾದ ಆಶೋಕ್, ಶಿವಕುಮಾರ್, ಪುರುಷೋತ್ತಮ, ದೀಪಕ್, ಅಂಬರೀಶ್ ಘಂಟಿ ಭರಮಾ ಬಡಿಗೇರ್ ಅವರು ಅರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ್ದಾರೆ.