ಕಾರ್ಕಳ, ಫೆ 07 (DaijiworldNews/HR): ಕಾರ್ಕಳ -ಉಡುಪಿ ರಾಜ್ಯ ಹೆದ್ದಾರಿ ನೀರೆ ಗ್ರಾಮ ಪಂಚಾಯುತ್ ವ್ಯಾಪ್ತಿಯ ಗುಡ್ಡೆಯಂಗಡಿ ಜಡ್ಡಿನಂಗಡಿ ಸುರಕ್ಷಿತ ಅರಣ್ಯ ಬಳಿಯಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಯೊಬ್ಬನಿಗೆ ನೀರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಕಿಂತಾ ನಾಯಕ್ ದಂಡ ವಿಧಿಸಿದ್ದಾರೆ.
ಜಾರ್ಕಳದ ಸತ್ಯಪ್ರಕಾಶ್ ಎಂಬಾತ ತನ್ನ ದ್ವಿಚಕ್ರ ವಾಹನದಲ್ಲಿ ಬಂದು ಮದ್ಯದ ಬಾಟಲು, ರಟ್ಟು ಸಹಿತ ತ್ಯಜ್ಯ ವಸ್ತುಗಳನ್ನು ಎಸೆದು ಪರಿಸರ ಸಂರಕ್ಷಣೆ ಅಡ್ಡಿ ಪಡಿಸಿದ ಎನ್ನಲಾಗಿದೆ.
ಅದೇ ವೇಳೆಗೆ ಅದೇ ರಸ್ತೆಯಾಗಿ ಕಾರೊಂದರಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೋಗುತ್ತಿದ್ದರು. ದ್ವಿಚಕ್ರ ವಾಹನ ಸವಾರನಲ್ಲಿ ನಿಲ್ಲುವಂತೆ ಸೂಚಿಸಿದರೂ, ಅಲ್ಲಿಂದ ಹೊರಟು ಹೋಗಿದ್ದನು. ಬೆನ್ನಟ್ಟಿದ ಅಧಿಕಾರಿಣಿ ಅನತಿ ದೂರದಲ್ಲಿಯೇ ದ್ವಿಚಕ್ರ ವಾಹವನ್ನು ತಡೆದು ನಿಲ್ಲಿಸಿದರು.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಗಣೇಶ್ ರವರನ್ನು ಬರುವಂತೆ ತಿಳಿಸಿ ಸ್ಥಳದಲ್ಲೇ ತ್ಯಾಜ್ಯ ಎಸೆದಾತನಿಗೆ ರೂ .500ದಂಡ ವಿಧಿಸಿದ್ದಾರೆ. ಘಟನಾ ಸ್ಥಳದಿಂದ ತ್ಯಾಜ್ಯವನ್ನು ತೆಗೆಸಿ ಎಸ್ .ಎಲ್ .ಆರ್ .ಎಂ .ವಾಹನಕ್ಕೆ ಹಾಕಲು ಸೂಚಿಸಿರುತ್ತಾರೆ.
ಸ್ವಚ್ಚ ಕಾರ್ಕಳ ಸುಂದರ ಕಾರ್ಕಳ ಘೋಷಣೆಯೊಂದಿಗೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯಾಡಳಿತ ಅಲ್ಲಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗುತ್ತಿದ್ದರೂ, ವಿಘ್ನು ಸಂತೋಷಿಗಳು ಅಲ್ಲಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿವೆ.