ಉಡುಪಿ, ಫೆ 07 (DaijiworldNews/HR): ರಾಹುಲ್ ಗಾಂಧಿ ಅಭಿಪ್ರಾಯವೇ ನನ್ನ ಅಭಿಪ್ರಾಯ. ಮಕ್ಕಳನ್ನು ಮುಂದಕ್ಕೆ ಇಟ್ಟು ಕೊಂಡು ಅವರ ಭಾವನೆಗಳನ್ನು ಕೆರಳಿಸಿ ರಾಜಕೀಯ ಮಾಡ್ತ ಇದ್ದಾರೆ. ಉಡುಪಿ-ಮಂಗಳೂರು ವಿದ್ಯಾವಂತರ, ಬುದ್ದಿವಂತರ ಪ್ರಜ್ಞಾವಂತರ ಜಿಲ್ಲೆ. ಇಡೀ ಜಗತ್ತು ಭಾರತವನ್ನು ಗಮನಿಸುತ್ತಿದೆ ಹಿಜಾಬ್ ವಿವಾದ ಕುರಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಾಪು ತಾಲೂಕಿನ ಎರ್ಮಾಳಿನಲ್ಲಿರುವ ರಾಜೀವಗಾಂಧಿ ಅಕಾಡೆಮಿಯಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು, ಕರಾವಳಿಯಲ್ಲಿ ಓದಲು ಸಾವಿರಾರು ಮಂದಿ ಇಲ್ಲಿಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಬದುಕಿನ ದಾರಿ ತೋರಿಸೋದು ಬಿಟ್ಟು, ಕ್ಷುಲ್ಲಕ ರಾಜಕಾರಣಕ್ಕೆ ಬೆಂಕಿ ಹಚ್ಚಿ ಬಿಟ್ಟಿದ್ದಾರೆ ಎಂದರು.
ಕರಾವಳಿಯಲ್ಲಿ ಸಾಕಷ್ಟು ಆರ್ಥಿಕತೆ ಹೆಚ್ಚಿಸುವ ಸಂಪತ್ತು ಇದೆ. ಧಾರ್ಮಿಕ ಕ್ಷೇತ್ರ, ಪುಣ್ಯ ಕ್ಷೇತ್ರ , ಪ್ರವಾಸಿ ತಾಣಗಳಿದ್ದು ಉದ್ಯೋಗ ಸೃಷ್ಟಿ ಮಾಡುವುದನ್ನು ಬಿಟ್ಟು, ಜನ ತಮ್ಮ ಊರನ್ನು ಬಿಟ್ಟು ಪರರಾಜ್ಯಕ್ಕೆ ಪರವೂರಿಗೆ ಉದ್ಯೋಗ ಅರಸಿಕೊಂಡು ಹೋಗುತ್ತಿದ್ದಾರೆ. ಹೊರಗಿನ ಜನರು ಇಲ್ಲಿಗೆ ಬರುವಂತೆ ಆಕರ್ಷಿಸುವದನ್ನು ಬಿಟ್ಟು, ಮಕ್ಕಳ ಮನಸ್ಸಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುವುದನ್ನು ನೋಡಲು ಮನಸಿಗೆ ನೋವಾಗುತ್ತಿದೆ ಎಂದು ಟೀಕಿಸಿದರು
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ನಂತರ ದೇಶಕ್ಕೆ ಕಂಟಕ ಬಂದಿರುವುದನ್ನು ನಾವು ಗಮನಿಸಿದ್ದೇವೆ. ಎಲ್ಲ ಪದಾರ್ಥಗಳು ದುಬಾರಿಯಾಗಿದೆ. ಜನರಿಗೆ ನೋವಾಗಿದೆ. ಯುವಕರಿಗೆ ಉದ್ಯೋಗವಿಲ್ಲ. ಜನ ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಎಲ್ಲ ಕ್ಷೇತ್ರಗಳಿಗೂ ತೊಂದರೆಯಾಗಿದೆ, ಆದರೆ ಬಿಜೆಪಿ ಸರಕಾರ ಘರ್ಷಣೆ ಸುರಿಮಳೆ ಬಿಟ್ಟು ಏನು ಮಾಡಿಲ್ಲ. ಕೋವಿಡ್ ನಿಂದಾಗಿ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ನೀಡುವ ಭರವಸೆ ಕೊಟ್ಟರು. ಆದ್ರೆ ಏನು ಮಾಡಿಲ್ಲ ಎಂದು ಆರೋಪಿದ್ದಾರೆ.
ಕೆಲವು ಹೊಸ ಯುವಕರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ. ಯುವಕರು ಕಾಂಗ್ರೆಸ್ ಪೂರ್ವ ಪಕ್ಷದಲ್ಲಿ ಗುರುತಿಸಿಕೊಳ್ಳಲು ಇಚ್ಛೆ ಹಾಗಾಗಿ, ಸೋನಿಯಾಯ ಗಾಂಧಿಯವರ ನಿರ್ದೇಶನದಂತೆ ಸದಸ್ಯತ್ವಕ್ಕೆ ಅವಕಾಶ ಮಾಡಿಕೊಡಲು ರಾಜ್ಯ ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ಆರಂಭ ಮಾಡಿದೆ. ಡಿಜಿಟಲ್ ಗೆ ಆದ್ಯತೆಯನ್ನು ಕೊಡುತ್ತಿದ್ದೇವೆ. ಪ್ರತಿ ಬೂತ್ ಗೆ ಇಬ್ಬರು ನಾಯಕರ ಆಯ್ಕೆ ಮಾಡಿ, ಅವರನ್ನ ಕಳುಹಿಸಿಕೊಡ್ತಾ ಇಡ್ತೇವೆ ಎಂದರು.
ಈ ವೇಳೆ ಬಿ ಎಲ್ ಶಂಕರ್, ಮಂಜುನಾಥ ಭಂಡಾರಿ, ಅಭಯ ಚಂದ್ರ ಜೈನ್, ಅಶೋಕ್ ಕುಮಾರ್ ಕೊಡವೂರು, ಉಡುಪಿ ಜಿಲ್ಲಾಧ್ಯಕ್ಷರು, ಕಾಪು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಮಾಜಿ ಬೈಂದೂರು ಶಾಸಕ ಗೋಪಾಲ್ ಪೂಜಾರಿ, ಮಿಥುನ್ ರೈ , ಶೆರ್ಲಿ ಲೋನಾ, ಕೆಪಿಸಿಸಿ ಪ್ಯಾನಲಿಸ್ಟ್, ಹರೀಶ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ದಕ್ಷಿಣ ಕನ್ನಡ, ಮೆಟಿಲ್ಡಾ ಡಿಸೋಜ, ಕೆಪಿಸಿಸಿ ಸಮನ್ವಯಾಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.