ಉಡುಪಿ, ಫೆ 07 (DaijiworldNews/KP): ಹಿಜಾಜ್-ಕೇಸರಿ ವಿವಾದವನ್ನು ಮೊದಲು ಇತ್ಯರ್ಥಗೊಳಿಸಿ ವಿದ್ಯಾರ್ಥಿಗಳಿಗೆ ಅವರ ಸಾಂವಿಧಾನಿಕ ಹಕ್ಕಿನ ಪ್ರಕಾರ ಶಿಕ್ಷಣ ನೀಡಬೇಕು ಎಂದು ಸಹಬಾಳ್ವೆ ಸಂಘಟನೆ ಅಧ್ಯಕ್ಷ ಅಮೃತ್ ಶೆಣೈ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಎಷ್ಟೋ ವರ್ಷಗಳಿಂದ ಮುಸ್ಲಿಂ ವಿದ್ಯಾರ್ಥಿಗಳು ಬುರ್ಕಾ ಹಾಗೂ ಹಿಂದೂ ವಿದ್ಯಾರ್ಥಿಗಳು ಬಿಂದಿ ಧರಿಸಿ ಕಾಲೇಜಿಗೆ ಬರುತ್ತಿದ್ದರು, ಆದರೆ ಈಗ ಹೊಸತಾಗಿ ಕೇಸರಿ ಶಾಲು ಧರಿಸಲು ಪ್ರಾರಂಭಿಸುವ ಮೂಲಕ ಜಿಲ್ಲೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾವಾಗಿದೆ ಆದಷ್ಟು ಬೇಗ ಈ ಸಮಸ್ಯೆಗೆ ಮುಕ್ತಿ ಹಾಡಬೇಕು ಎಂದರು.
ಇನ್ನು ರಾಜ್ಯ ಸರ್ಕಾರವು ಈ ಘಟನೆಯನ್ನು ತಿಳಿಗೊಳಿಸುವುದನ್ನು ಬಿಟ್ಟು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ, ಅವರ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆ ರೂಪಿಸಿದ್ದಾರೆ ಎಂದರು.
ರಾಜ್ಯ ಸರ್ಕಾರಕ್ಕೆ ನಾವು ಹೇಳುವುದು ಇಷ್ಟೆ ಸ್ವಾತಂತ್ರ್ಯ ಭಾರತದಲ್ಲಿ ಎಷ್ಟೋ ವರ್ಷಗಳಿಂದ ಹಾಕಿಕೊಂಡು ಬಂದಿರುವ ಬುರ್ಕಾಗೆ ಅವಕಾಶ ನೀಡಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಗೌರವದಿಂದ ಸ್ವಾಗತಿಸಿ ಹಾಗೂ ಸಮವಸ್ತ್ರದ ಮೇಲೆ ಹುಸ ಬಣ್ಣ ಧರಸಿ ಬಂದ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಬುದ್ದಿ ಮಾತು ಹೇಳಿ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸದರು.
ಈ ವೇಳೆ ಮಾತನಾಡಿದ ಉಡುಪಿಯಲ್ಲಿ ದಲಿತ ಮುಖಂಡ ಮುಖಂಡ ಸುಂದರ್ ಮಾಸ್ತರ್, ಕೋಮುವಾದ ಹುಟ್ಟುಹಾಕಲು ಇರುವ ಎಲ್ಲಾ ದಾರಿಯನ್ನು ಬಿಜೆಪಿಯು ಬಳಸಿಕೊಳ್ಳುತ್ತ ಬರುತ್ತಿದೆ, ವಿದ್ಯಾಭ್ಯಾಸ ವಿಚಾರದಲ್ಲು ಆ ರೀತಿ ಮಾಡದೆ ಉತ್ತಮ ಶಾಲಾ ವಾತಾವರಣವನ್ನು ಮೊದಲು ಕಲ್ಪಿಸಿ,ಈ ಪ್ರಕರಣ ಹೈಕೋರ್ಟನಲ್ಲಿ ಇರುವಾಗ ಪಿಯು ಬೋರ್ಡ್ ನಿಂದ ಹೊಸ ಆದೇಶ ನೀಡಿರುವುದು ಕಾನೂನು ಬಾಹಿರ ಎಂದರು.
ಇನ್ನು ಬಿಜೆಪಿ ಸರ್ಕಾರದಲ್ಲಿ ಕೋಮುವಾದವನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಇದ್ದಾರೆ, ಮತಾಂತರದ ನಂತರ ಶಾಲಾ ಸಮವಸ್ತ್ರ ವಿಚಾರಕ್ಕೆ ಕೈ ಹಾಕಿದ್ದಾರೆ ಎಂದರು.
ಅಲ್ಲದೆ ಸ್ಥಳೀಯ ಶಾಸಕರು ಮಾಡಿದ ಸಣ್ಣ ವಿಚಾರವನ್ನು ದೊಡ್ಡ ವಿವಾದ ಮಾಡುತ್ತಿದ್ದಾರೆ, ಆದರೆ ಕೇಸರಿಯಿಂದ ಏನೆಲ್ಲಾ ಅವಾಂತರ ಆಗಿದೆ ಎಂಬುದನ್ನು ಜನರು ತಿಳಿದುಕೊಂಡಿದ್ದಾರೆ ಎಂದು ಸುಂದರ್ ಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದರು.