ಉಡುಪಿ, ಫೆ 07 (DaijiworldNews/MS): ಜಿಲ್ಲೆಯ ಮತ್ತೊಂದು ಕಾಲೇಜಿಗೂ ಹಿಜಾಬ್ - ಕೇಸರಿ ಶಾಲು ವಿವಾದ ಹಬ್ಬಿದೆ.ಮಣಿಪಾಲದಲ್ಲಿರುವ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ತೆಗೆದು ಪ್ರವೇಶಿಸಲು ಇತರ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಸರ್ಕಾರದ ಹೊಸ ಆದೇಶದ ಹಿನ್ನಲೆಯಲ್ಲಿ ಹಿಜಾಬ್ ತೆಗೆದು ಪ್ರವೇಶಿಸಲು ಆಗ್ರಹಿಸಿದ್ದು, ಒಂದು ವೇಳೆ ಆದೇಶ ಪಾಲನೆ ಮಾಡದೆ ಇದ್ದರೆ, ಕೇಸರಿ ಶಾಲು ಹಾಕೋದಾಗಿ ಹಿಂದೂ ವಿದ್ಯಾರ್ಥಿಗಳ ಗುಂಪು ಎಚ್ಚರಿಕೆ ನೀಡಿದೆ.
ಎರಡೂ ಗುಂಪಿನ ವಿದ್ಯಾರ್ಥಿ ಗಳ ಜೊತೆ ಮಾತುಕತೆ ನಡೆಸಿದ ಕಾಲೇಜು ಪ್ರಾಂಶುಪಾಲರು,ನಾಳೆಯಿಂದ ಹಿಜಾಬ್ ತೆಗೆದು ತರಗತಿ ಪ್ರವೇಶಿಸಲು ಸೂಚಿಸಿದ್ದಾರೆ.
ಹಿಜಾಬ್ ತೆಗೆಯದಿದ್ದರೆ ನಾಳೆ ಕೇಸರಿ ಶಾಲು ಹಾಕೋದಾಗಿ ವಿದ್ಯಾರ್ಥಿಗಳ ಗುಂಪೊಂದು ಎಚ್ಚರಿಸಿದ್ದು,ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದಿದ್ದರೆ ವಿದ್ಯಾರ್ಥಿಗಳು ಕೇಸರಿ ಶಾಲು,ಪಂಚೆ,ರುದ್ರಾಕ್ಷಿ ಮಾಲೆ ಧರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದೂ ಜಾಗರಣ ವೇದಿಕೆ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಘಟಿಸಿರುವ ಬಗ್ಗೆ ತಿಳಿದುಬಂದಿದ್ದು, ವಿದ್ಯಾರ್ಥಿಗಳ ಮೂಲಕ ಹಿಜಾಬ್ ನಿಲ್ಲಿಸುವ ಎಚ್ಚರಿಕೆ ನೀಡಿದೆ.