ಮಂಗಳೂರು, ಫೆ 06 (DaijiworldNews/KP): ಹಿಜಾಜ್ ಧರಿಸಬಾರದೆಂದು ಸರ್ಕಾರದ ಆದೇಶ ಇದೆಯಾ, ಸರ್ಕಾರದ ಆದೇಶ ಇದ್ದಲ್ಲಿ ಅದರ ಪ್ರತಿಯನ್ನು ಬಹಿರಂಗ ಪಡಿಸಲಿ ಎಂದು ಮಂಗಳೂರಿನ ಮಾಜಿ ಎಂಎಲ್ಸಿ ಮುಸ್ಲಿಂ ಸೆಂಟ್ರಲ್ ಕಮೀಟಿ ಅಧ್ಯಕ್ಷ ಕೆ.ಎಸ್.ಮಸೂದ್ ಹಾಜಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯು ಸರ್ಕಾರಿ ಕಾಲೇಜಿನ ಸರ್ಕಾರದ ಅಧಿನದಲ್ಲಿದೆ, ಅಲ್ಲಿನ ಪ್ರಾಂಶುಪಾಲರು ಸರ್ಕಾರಿ ಸೇವಕರು, ಹಾಗಿದ್ದ ಮೇಲೆ ಅವರು ತಮ್ಮದೆ ಆದ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಿಲ್ಲ, ಇದೇ ರೀತಿ ಅವರ ಮಕ್ಕಳನ್ನು ಕೂಡ ಶಾಲೆಯಿಂದ ಹೊರ ಹಾಕಿದ್ದರೆ ಅವರು ಸುಮ್ಮನಿರ್ತಾರ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಹಿಂದೂ ವಿದ್ಯಾರ್ಥಿಗಳು ಅವರ ಜಾತಿಯನ್ನು ಆರಾಧನೆ ಮಾಡಲಿ ಅಥವಾ ಕೇಸರಿ ಶಾಲು ಮತ್ತು ನಾಮ ಹಾಕಲಿ ನಮ್ಮ ಅಡ್ಡಿ ಎನು ಇಲ್ಲ, ಆದರೆ ಈ ವಿಚಾರವಾಗಿ ಕೋಮುಗಲಭೆ ಸೃಷ್ಟಿ ಮಾಡುವುದು ಬೇಡ ಎಂದರು.
ಇನ್ನು ಪ್ರಾಂಶುಪಾಲರು ಸರ್ಕಾರ ಆದೇಶ ಪಾಲಿಸಿದ್ದೆ ಆದಲ್ಲಿ ಸರ್ಕಾರದ ಆದೇಶದ ಪ್ರತಿಯನ್ನು ಬಹಿರಂಗ ಪಡಿಸಲಿ ಈ ವಿಚಾರವಾಗಿ ಈಗಾಗಲೇ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮೀಟಿಯಿಂದ ಎಲ್ಲಾ ಅಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಇನ್ನು ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜಿಗೆ ಶುಲ್ಕ ನೀಡಲು ಹಣ ಇಲ್ಲ, ಕೋರ್ಟ್ಗೆ ಹೋಗಲು ಹಣ ಇದ್ಯಾ ಎಂದು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಿ ಶುಲ್ಕ ಎಷ್ಟು ಬಾಕಿ ಇದೆ, ಯಾರ ಬಳಿ ಬೇಡುವ ಅವಶ್ಯಕತೆ ಇಲ್ಲ ನಾನೇ ಕಟ್ಟುತ್ತೇನೆ, ಆದರೆ ಇದರ ಬಗ್ಗೆ ಸುನೀಲ್ರ ಹತ್ತಿರ ಸಾಕ್ಷಿ ಇದೆಯಾ? ಮೊದಲು ಅದನ್ನು ನೀಡಿ ನಂತರ ವಿದ್ಯಾರ್ಥಿನಿಗಳನ್ನು ಗೇಟಿನಿಂದ ಹೊರ ಹಾಕಲಿ ಅದನ್ನು ಬಿಟ್ಟು ಅಸಂಬದ್ದವಾಗಿ ಮಾತನಾಡುವುದಲ್ಲ ಎಂದು ಎಚ್ಚರಿಕೆ ನೀಡಿದರು.