ಕಾರ್ಕಳ, ಫೆ 05 (DaijiworldNews/HR): ಕಾಂತಾವರ ಬಾರಾಡಿ ಬೀಡು ಪಾಂಡ್ಯರಾಜ ಬಲ್ಲಾಳ ಸ್ಮಾರಣಾರ್ಥ ಕಂಬಳ ಕ್ರೀಡಾಂಗಣದಲ್ಲಿ ೩೫ನೇ ವರ್ಷದ ಸೂರ್ಯಚಂದ್ರ ಜೋಡುಕರೆ ಕಂಬಳಕ್ಕೆ ಫೆಬ್ರವರಿ 5ರಂದು ಚಾಲನೆ ದೊರೆಯಿತು.
175ಜೋಡಿ ಕೋಣಗಳು ಪಾಲ್ಗೊಂಡಿದ್ದು, ಕಂಬಳದ ವ್ಯವಸ್ಥಾಪಕ ಡಾ.ಕೆ.ಜೀವಂಧರ ಬಲ್ಲಾಳ ಹಾಗೂ ಸುಮತಿ ಆರ್.ಬಲ್ಲಾಳ್ ಕುಟುಂಬಸ್ಥರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಂಬಳ ಸಮಿತಿ ಸದ್ಯರುರಾದ ಪ್ರೋ.ಗುಣಪಾಲಕಡಂಬ, ಇರ್ವತ್ತೂರು ಭಾಸ್ಕರ್ ಎಸ್.ಕೋಟ್ಯಾನ್, ಇರ್ವತ್ತೂರು ಉದಯ ಎಸ್.ಕೋಟ್ಯಾನ್, ರವೀಂದ್ರ ಮಡಿವಾಳ, ವಿಜಯಕುಮಾರ್ ಕಂಗಿನ ಮನೆ, ರಮೇಶ್ ಭಂಡಾರಿ, ಅಜಿತ್ ಬಲ್ಲಾಳ್, ನಕ್ರೆ ಅಂತೋನಿ ಡಿಸೋಜಾ, ಧರ್ಮರಾಜ ಕಂಬಳಿ, ಮಹಾವೀರ ಪಾಂಡಿ, ರತನ್ ಬಾರಾಡಿ ಮೊದಲಾದವರು ಉಪಸ್ಥಿತರಿದ್ದರು.