ಕಾಸರಗೋಡು, ಫೆ 05 (DaijiworldNews/MS): ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಸಹಿತ ಮೂವರನ್ನು ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಕಾಸರಗೋಡು ಚೌಕಿ ಕಾವುಗೋಳಿ ಹಾಗೂ ಬದಿಯಡ್ಕ ಕನ್ಯಪಾಡಿಯಿಂದ ಗಾಂಜಾ ವಶಪಡಿಸಿ ಕೊಳ್ಳಲಾಗಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಯಂತೆ ಕಾರ್ಯಾಚರಣೆ ನಡೆಸಿ ಕಾವುಗೋಳಿಯಲ್ಲಿ ಆಟೋ ರಿಕ್ಷಾವೊಂದರಲ್ಲಿ ಸಾಗಾಟ ಮಾಡುತ್ತಿದ್ದ 23.300 ಕಿಲೋ ಗಾಂಜಾ ವನ್ನು ವಶಪಡಿಸಿ ಕೊಂಡು ಆಟೋದಲ್ಲಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕನ್ಯಪಾಡಿಯ ಕ್ವಾಟರ್ಸ್ ನಲ್ಲಿ ಗಾಂಜಾ ದಾಸ್ತಾ ನಿರಿ ಸಿರುವ ಬಗ್ಗೆ ಮಾಹಿತಿ ನೀಡಿದ್ದು, ಇದರಂತೆ ದಾಳಿ ನಡೆಸಿದ ಪೊಲೀಸರು 22.900 ಕಿಲೋ ಗಾಂಜಾ ವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನೆಲ್ಲಿಕಟ್ಟೆ ಅಮೂಸ್ ನಗರದ ಅಬ್ದುಲ್ ರಹಮಾನ್ (52) ಹಾಗೂ ನಾಯಮ್ಮರ ಮೂಲೆ ಪೆರುಂಬಳ ದ ಸಿ. ಎ ಅಹಮ್ಮದ್ ಕಬೀರ್ (40) ಹಾಗೂ ಆದೂರು ಕುಂಟಾರಿನ ಕೆ. ಪಿ ಮುಹಮ್ಮದ್ ಹಾರಿಸ್ (36) ಎಂಬವರನ್ನು ಬಂಧಿಸಲಾಗಿದೆ.