ಕಾರ್ಕಳ, ಜ 31(DaijiworldNews/MS): ದೊಂಡೆರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ರಸ್ತೆ ಬದಿಯಲ್ಲಿ ತರ್ಪಾಲ್ ಹೊದಿಸಿ ನಿಂತುಕೊಂಡಿದ್ದ 408 ಟೆಂಪೋದಲ್ಲಿ ಕುರಿತು ಪೊಲೀಸರಿಗೆ ತನಿಖೆ ನಡೆಸಿದಾಗ ಗೋ ಕಳವು ಜಾಲದ ಮಹತ್ವ ವಿಚಾರ ಬೆಳಕಿಗೆ ಬಂದಿದೆ.
ಅಜೆಕಾರು ಠಾಣಾಧೀಖಾರಿ ಸುದರ್ಶ ರವರು ಟೆಂಪೋ ಪಕ್ಕದಲ್ಲಿ ಜೀಪನ್ನು ನಿಲ್ಲಿಸಿ ಅದರ ಚಾಲಕನಲ್ಲಿ ಎಲ್ಲಿಂದ ಬಂದದ್ದು ಎಂಬ ಬಗ್ಗೆ ವಿಚಾರಿಸಿದಾಗ ಅದರ ಚಾಲಕನು ಟೆಂಪೋ ವನ್ನು ಒಮ್ಮೆಲೆ ಮುಂದಕ್ಕೆ ಚಲಾಯಿಸಿ ಹೋಗಿದ್ದನು. ಆ ಟೆಂಪೋವನ್ನು ಬೆನ್ನಟ್ಟಿದ್ದು, ಟೆಂಪೋವು ಹರಿಖಂಡಿಗೆ, ಪೆರ್ಡೂರು, ಕುಕ್ಕೆಹಳ್ಳಿ, ಕೆ.ಜಿ. ರೋಡ್, ಸಂತೆಕಟ್ಟೆ, ಕಿನ್ನಿಮುಲ್ಕಿ, ಸಂಪಿಗೆನಗರ, ಪಿತ್ರೋಡಿ, ಉದ್ಯಾವರ ತಲುಪಿ ಅಲ್ಲಿನ ಒಳ ರಸ್ತೆಗಳಲ್ಲಿ ತಿರುಗುತ್ತಾ ಉದ್ಯಾವರ ಹೈವೆಗೆ ಬಂದು ಅಲ್ಲಿಂದ ಕರಾವಳಿ ಜಂಕ್ಷನ್ ಮೂಲಕ ಉಡುಪಿ, ಮಣಿಪಾಲ, ಪರ್ಕಳದ ಮೂಲಕ ಹಿರಿಯಡ್ಕದ ಪೆಟ್ರೋಲ್ ಪಂಪ್ ಬಳಿಯ ಬಂದು ತಲುಪಿತು.
ನಿಲ್ಲಿಸಿದ ಟೆಂಪೋದಲ್ಲಿದ್ದ ಆರೋಪಿಯೋರ್ವ ಅನತಿ ದೂರದ ಹಾಡಿಯೊಳಗೆ ಓಡಿ ಪರಾರಿಯಾಗಿದ್ದಾನೆ. ನಂಬರ್ ಪ್ಲೇಟ್ ಇಲ್ಲದ ಟೆಂಪೋವನ್ನು ಗೋ ಕಳವು ಕೃತ್ಯಕ್ಕೆ ಬಳಸಲಾಗಿರುವುದು ಕಂಡು ಬಂದಿದೆ. ಟೆಂಪೋದೊಳಗೆ ಕಪ್ಪು ಬಣ್ಣದ ಹೆಣ್ಣು ದನ-1, ಕಂದು ಬಣ್ಣದ ಗಂಡು ಹೋರಿ-1 ಹಾಗೂ ಕಂದು ಬಣ್ಣದ ಗಂಡು ಕರು -1 ಪತ್ತೆಯಾಗಿದೆ. ಇವುಗಳನ್ನು ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಲಾಗಿತ್ತು. ಇವುಗಳ ಅಂದಾಜು ಮೌಲ್ಯ ರೂ. 20,000 ಎಂದು ಅಂದಾಜಿಸಲಾಗಿದೆ. ವಾಹನದ ಮುಂಭಾಗದ ಕ್ಯಾಬಿನ್ ನಲ್ಲಿ ಕಪ್ಪು ಬಣ್ಣದ ಪರ್ಸ್ ಕಂಡು ಬಂದಿದೆ. ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ 407 ಟೆಂಪೋದ ಅಂದಾಜು ಮೌಲ್ಯ ರೂ. 4,00,000 ಆಗಿರುತ್ತದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿದೆ.