ಉಡುಪಿ,ಜ.29 (DaijiworldNews/KP): ವಿಧಾನಸೌಧದಿಂದ ಉಡುಪಿಯವರೆಗೂ ಆರ್ಟಿಎ ಇಲಾಖೆ ಮೇಲೆ ಕೆಟ್ಟ ಟೀಕೆಗಳು ವ್ಯಕ್ತವಾಗುತ್ತಿದ್ದು. ಭ್ರಷ್ಟಾಚಾರ ಮತ್ತು ಲಂಚ (ಕಮಿಷನ್ ಏಜೆಂಟರು) ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಜನಸ್ನೇಹಿ ಇಲಾಖೆ ಮತ್ತು ಸೇವೆಯಲ್ಲಿ ಪಾರದರ್ಶಕವಾಗಿಸಲು ಪ್ರಯತ್ನಿಸುತ್ತೇವೆ ಎಂದು ಜಿಲ್ಲಾ ಆರ್ಟಿಒ ಜೆ.ಪಿ.ಗಂಗಾಧರ್ ಇಂದು ಭರವಸೆ ನೀಡಿದರು.
ನಗರದ ಬ್ರಹ್ಮಗಿರಿಯ ಪ್ರೆಸ್ಕ್ಲಬ್ನಲ್ಲಿ ನಡೆದ ಮಾಸಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಟಿಎಯಿಂದ 2020-21ನೇ ಹಣಕಾಸು ವರ್ಷದಲ್ಲಿ ಒಟ್ಟು 1,28,77,19,991 ರೂ. ರಾಯಲ್ಟಿ ಸಂಗ್ರಹಿಸಲಾಗಿದ್ದು, 93,55, 79,604 ರೂ. ರಾಯಲ್ಟಿಯನ್ನು ಡಿಸೆಂಬರ್ 2021 ರ ಅಂತ್ಯದ ವೇಳೆಗೆ ಸಂಗ್ರಹಿಸಲಾಗಿದೆ ಮತ್ತು 12,14,34,361 ರೂಗಳನ್ನು 2022 ಜನವರಿ 27ರವರೆಗೆ ಸಂಗ್ರಹಿಸಲಾಗಿದೆ. ಇನ್ನು ಈ ವರ್ಷ 2138 ವಾಹನಗಳ ತಪಾಸಣೆ ನಡೆಸಲಾಗಿದ್ದು, 266 ವಾಹನಗಳ ವಿರುದ್ದ ಪ್ರಕರಣಗಳನ್ನು ದಾಖಲಿಸಿ, 50 ವಾಹನಗಳ ಸಾರಿಗೆ ಪ್ರಾಧಿಕಾರ ಜಪ್ತಿ ಮಾಡಿದೆ. ತೆರಿಗೆ ಮೊತ್ತ ಸುಮಾರು 13,97, 686, ದಂಡ ಮೊತ್ತ 13, 21,000 ಮತ್ತು ಒಟ್ಟು 27, 18, 686 ರೂ.ಗಳನ್ನು ಆರ್ಟಿಎ ಸಂಗ್ರಹಿಸಲಾಗಿದೆ ಎಂದರು.
ಇನ್ನು ಉಡುಪಿಗೆ ಸ್ವಯಂಚಾಲಿತ ಡ್ರೈವಿಂಗ್ ಟ್ರ್ಯಾಕ್ ಬಗ್ಗೆ ಮಾತನಾಡಿದ ಅವರು, ಅಲೆವೂರಿಯ 5 ಎಕರೆ ಜಾಗದಲ್ಲಿ ಮೈಸೂರಿನಂತೆ ಸ್ವಯಂಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಬರಲಿದ್ದು, ಇದು ಸಂಪೂರ್ಣ ಸ್ವಯಂಚಾಲಿತ ಟ್ರ್ಯಾಕ್ ಆಗಿದ್ದು, ಯಾವುದೇ ಹಂತದಲ್ಲಿ ಯಾವುದೇ ಹಸ್ತಚಾಲಿತ ಹಸ್ತಕ್ಷೇಪವಿಲ್ಲ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯಲ್ಲಿ ಚಾಲನಾ ಪರವಾನಗಿಗಳನ್ನು ನೀಡಲಾಗುತ್ತದೆ.
ನವೆಂಬರ್ 2021 ರಿಂದ ಸ್ಮಾರ್ಟ್ ಕಾರ್ಡ್ ಮಾಫಿಯಾವನ್ನು ತಡೆಯುವ ಸಲುವಾಗಿ ಸರ್ಕಾರವು ಸ್ಮಾರ್ಟ್ ಕಾರ್ಡ್ಗಳನ್ನು ನೀಡುವುದನ್ನು ರದ್ದುಗೊಳಿಸಿದೆ. ಜಿಲ್ಲೆಯಲ್ಲಿ ಕಳಪೆ ಇಂಟರ್ನೆಟ್ ಸಂಪರ್ಕ ಮತ್ತು ವಿದ್ಯುತ್ ಕಾರಣ, ಅರ್ಜಿದಾರರು ಯಾವಾಗಲೂ ಸರದಿ ಸಾಲಿನಲ್ಲಿ ಕಾಯಿತ್ತಿದ್ದರು. ಹೀಗಾಗಿ ಆರ್ಟಿಒ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಕಾರಣ ಕಾರ್ಡ್ ವ್ಯವಸ್ಥೆ ರದ್ದುಗೊಳಿಸಲಾಗಿದೆ ಎಂದರು.
ಆರ್ಟಿಎಯಲ್ಲಿ ಸಿಬ್ಬಂದಿ ಕೊರತೆ, ಸಾರಿಗೆ ಕಚೇರಿಯಲ್ಲಿ ಕಚೇರಿ ಸಿಬ್ಬಂದಿ ಕೊರತೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿ 36 ಸಿಬ್ಬಂದಿಯ ಬದಲು 14 ಸಿಬ್ಬಂದಿ ಕಚೇರಿಯಲ್ಲಿದ್ದಾರೆ. ಅಲ್ಲದೆ ಆರ್ಟಿಎದಲ್ಲಿ ಕೇವಲ ನಾಲ್ವರು ಮೋಟಾರು ವಾಹನ ನಿರೀಕ್ಷಕರು ಇದ್ದು, ಈ ಪೈಕಿ ಒಬ್ಬರು ಇತ್ತೀಚೆಗೆ ಚಿಕ್ಕಮಗಳೂರಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸಿಬ್ಬಂದಿ ಕೊರತೆಯ ನಡುವೆಯೂ ಹೆಚ್ಚು ಸಮಯ ತೆಗೆದುಕೊಳ್ಳದೆ ಜನರಿಗೆ ಸೇವೆ ಒದಗಿಸಲು ಸಾರಿಗೆ ಇಲಾಖೆ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಕೊರೊನಾದಿಂದ ಹಲವಾರು ಮಂದಿ ಆರ್ಥಿಕ ಸಮಸ್ಯೆ ಎದುರಿಸುತಿದ್ದಾರೆ,ಈವರೆಗೂ 170 ಬಸ್ಗಳು ತಮ್ಮ ಪರ್ಮಿಟ್ಗಳನ್ನು ಹಣಕಾಸಿನ ಸಮಸ್ಯೆಗಳಿಂದಾಗಿ ಒಪ್ಪಿಸಿದ್ದು, ಅಲ್ಲದೆ ಸುಮಾರು 329 ವಾಹನಗಳ ಪರವಾನಿಗೆಯನ್ನು ಒಪ್ಪಿಸಲಾಗಿದೆ.
ಅಪ್ರಾಪ್ತ ಮಕ್ಕಳಿಗೆ ಪೋಷಕರು ವಾಹನಗಳನ್ನು ನೀಡಬಾರದು. ಅಲ್ಲದೆ ಶಾಲೆಗಳಲ್ಲಿ ಅಥವಾ ಕ್ಯಾಂಪಸ್ ಒಳಗೆ ವಾಹನಗಳನ್ನು ತರಲು ವಿದ್ಯಾರ್ಥಿಗಳಿಗೆ ಅನುಮತಿ ಕೊಡಬಾರದು. ಒಂದು ವೇಳೆ ಅಪ್ರಾಪ್ತರಿಗೆ ವಾಹನ ನೀಡಿದರೆ ಅವರ ಜೀವವನ್ನು ಕಳೆದುಕೊಳ್ಳ ಸಾಧ್ಯತೆ ಇದೆ ಗಂಗಾಧರ್ ಹೇಳಿದರು.
ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಜೀರ್ ಪೋಳ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಪಲ್ಲವಿ ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿದರು.