ಸುಳ್ಯ, ಜ 29 (DaijiworldNews/HR): ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುನಲ್ಲಿ ವ್ಯಾಪಾರ ವಹಿವಾಟಿನ ಮೆಟ್ರಿಕ್ ಮೇಳವು ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮವನ್ನು ಮುತ್ತಪ್ಪ ಗೌಡ ಹೊಸಗದ್ದೆ ಉದ್ಘಾಟಿಸಿದ್ದು, ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮತ್ತು ಸಿಬ್ಬಂದಿವರ್ಗ, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮತ್ತು ಮಕ್ಕಳು, ಪೋಷಕ ವೃಂದ ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯಾದ 5 ನೇ ತರಗತಿಯ ತನುಷ್ ಅಂಬೆಕಲ್ಲು ಇವರು ತಮ್ಮ ಮನೆಯಲ್ಲಿ ತಾವೇ ಬೆಳೆಸಿದ ವಸ್ತುಗಳನ್ನು ಮಾರಿ ಸಂಗ್ರಹವಾದ 230 ರೂಪಾಯಿಗಳಲ್ಲಿ 200 ರೂಪಾಯಿಗಳನ್ನು ಶಾಲಾ ಆರೋಗ್ಯ ನಿಧಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.