ಉಳ್ಳಾಲ, ಜ 29 (DaijiworldNews/HR): ಮನೆಯಿಂದ ಮಂಗಳೂರಿನ ಮೀನಿನ ಧಕ್ಕೆಗೆ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೆಕಾರು ಪನೀರ್ ಹಿದಾಯತ್ ನಗರ ನಿವಾಸಿ ರೆಹಮತುಲ್ಲಾ ಯಾನೆ ಮುನ್ನಾ (55) ನಾಪತ್ತೆಯಾದವರು.
ಜ.1 ರಂದು ಮನೆಯಿಂದ ಹೋದವರು ವಾಪಸ್ಸಾಗದೇ ನಾಪತ್ತೆಯಾಗಿದ್ದಾರೆ.
ಈ ಕುರಿತು ಮನೆಮಂದಿ ಎಲ್ಲಾ ಕಡೆ ಹುಡುಕಾಡಿ ಧಕ್ಕೆಯಲ್ಲಿ ವಿಚಾರಿಸಿದಾಗ ರೂ.12,000 ಹಣವನ್ನು ಪರಿಚಿತರಿಂದ ಪಡೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ನಿ ಸಾಹಿರಾ ಭಾನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.