ಉಡುಪಿ, ಜ. 28 (DaijiworldNews/SM): "ಕಾಂಗ್ರೆಸ್ ನವರಿಗೆ ಬೇರೇನೂ ಕೆಲಸ ಇಲ್ಲ. ಕೊವಿಡ್ ಸಂಧರ್ಭದಲ್ಲಿ ಯಾ ರೀತಿ ನಿರ್ವಹಣೆ ಮಾಡಿದ್ದೇವೆ ಎಂಬುವುದು ಇಡೀ ರಾಜ್ಯಕ್ಕೆ ತಿಳಿದಿದೆ" ಎಂದು ಕರ್ನಾಟಕ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಕಿಡಿ ಕಾರಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು "ನಮಗೆ ಕಾಂಗ್ರೆಸ್ ನ ಸರ್ಟಿಪಿಕೇಟ್ ನ ಅಗತ್ಯ ಇಲ್ಲ. ಇತರ ರಾಜ್ಯಗಳಲ್ಲಿ ಸಂಬಳವನ್ನೂ ಸಮಯಕ್ಕೆ ಸರಿಯಾಗಿ ನೀಡಿಲ್ಲ. ನಮ್ಮ ರಾಜ್ಯದಲ್ಲಿ ಯಾವುದಕ್ಕೂ ಕೊರತೆಯಾಗದಂತೆ ನಾವು ಕಾರ್ಯ ನಿರ್ವಹಿಸಿದ್ದೇವೆ ಎಂದರು.
ಸಾಕಷ್ಟು ಉದ್ಯೂಗ ಸೃಷ್ಟಿ ಕೂಡಾ ಆಗುತ್ತಿದೆ. ಕೋವಿಡ್ ಸಮಯದಲ್ಲಿ ಕೆಲವೊಂದು ಇಂಡಸ್ಟ್ರಿಗಳಲ್ಲಿ ಸಮಸ್ಯೆ ಆದದ್ದೂ ನಿಜ. ನಿರುದ್ಯೋಗಿಗಳಿಗೆ ಕೆಲಸ ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತಾ ಇದ್ದೇವೆ" ಎಂದರು.
ಬೇಲೇಕೇರಿ ಅದಿರು ಕಳ್ಳತನದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು 'ಆ ಪ್ರಕರಣ ಕೋರ್ಟ್ ನಲ್ಲಿದೆ. ಕೋರ್ಟ್ ಆದೇಶ ಆಗುವವರೆಗೆ ಅದನ್ನು ಹರಾಜು ಹಾಕುವಂತಿಲ್ಲ. ಕೋರ್ಟ್ ಆದೇಶ ಆದ ಕೂಡಲೇ ಅದನ್ನು ವಿಲೇವಾರಿ ಮಾಡುತ್ತೇವೆ" ಎಂದರು.