ಪುತ್ತೂರು,ಜ.27 (DaijiworldNews/KP): ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ 19/4 ಕರ್ನಾಟಕ ಬೆಟಾಲಿಯನ್ ನಿಂದ ಸೂರ್ಯನಮಸ್ಕಾರ ವಿಶೇಷ ಕಾರ್ಯಕ್ರಮವು ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಸಚಿವಾಲಯವು ಮಕರ ಸಂಕ್ರಾಂತಿಯ ಮುಂದಿನ ದಿನ ಸೂರ್ಯನಮಸ್ಕಾರವನ್ನು ದೇಶದಾದ್ಯಂತ ಆಯೋಜಿಸಿತ್ತು. ಇದರ ಭಾಗವಾಗಿ ಫಿಸಿಕಲ್ ಡೈರೆಕ್ಟರ್ ರವಿಶಂಕರ್,ಯತೀಶ್ ಮತ್ತು ಜ್ಯೋತಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಿತು.
92 ಎಸ್.ಡಿ ಮತ್ತು 45 ಎಸ್ ಡಬ್ಲ್ಯೂ ಗಳು ಸೇರಿದಂತೆ 137 ಮಂದಿ ಭಾಗವಹಿಸಿ, ಸೂರ್ಯನಮಸ್ಕಾರದ ವಿವಿಧ ಹಂತದ ಯೋಗಾಸನ ಮಾಡಿದರು.
ಈ ಸಂದರ್ಭ ಕಾಲೇಜಿನ ಎನ್.ಸಿ.ಸಿ ಯೋಜನಾಧಿಕಾರಿ ಲೆಫ್ಟಿನೆಂಟ್ ಭಾಮೀ ಅತುಲ್ ಶೆಣೈ ಮತ್ತು ಆರ್ಮಿ ಸ್ಟಫ್ ಹವಾಲ್ದಾರ್ ದುರ್ಗಾ ಉಪಸ್ಥಿತರಿದ್ದರು.