ಮಂಗಳೂರು, ಜ 27 (DaijiworldNews/HR): ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾಗಿ ಡಾ.ಮಂಜುನಾಥ್.ಎಸ್.ರೇವಣ್ ಕರ್ ಅವರು ಆಯ್ಕೆಯಾಗಿದ್ದಾರೆ.
ಮಂಜುನಾಥ್ ಅವರು ಸೂರಜ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದು,ಕರ್ನಾಟಕ ಅನುದಾನರಹಿತ ಶಿಕ್ಷಣ ಸಂಸ್ಥೆಗಳು(ರಿ)ಇದರ ಉಪಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು,ತಮ್ಮ ಸಂಸ್ಥೆಯಲ್ಲಿ ರಾಷ್ಟ್ರ ಮಟ್ಟದ ಖ್ಯಾತಿಯ ಸೂರಜ್ ಕಲಾಸಿರಿಯನ್ನು ನಡೆಸಿದ ಕೀರ್ತಿ ಇವರದ್ದು, ಅಲ್ಲದೇ ತಮ್ಮ ಸಂಸ್ಥೆಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸಿ ಮೆಚ್ಚುಗೆ ಪಡೆದಿದ್ದಾರೆ.
ಇನ್ನು ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ರೊಟರಿಯ ಜಿಲ್ಲಾ ಘಟಕದ ಹಲವಾರು ಸೇವಾ ಕಾರ್ಯಕ್ರಮವನ್ನು ನಡೆಸಿದ ಖ್ಯಾತಿ ಮಂಜುನಾಥ್ ಅವರಿಗಿದ್ದು, ಸಮಾಜ ಸೇವೆಯಲ್ಲಿ ಕೂಡ ಹೆಸರುವಾಸಿಯಾಗಿದ್ದಾರೆ.