ಮಂಗಳೂರು, ಜ. 26(DaijiworldNews/SM): ಬರಡು ಭೂಮಿಯಲ್ಲಿ ಸುರಂಗ ಕೊರೆದು ನೀರು ಹರಿಸಿದ ಭಗೀರಥ ಮಹಾಲಿಂಗ ನಾಯ್ಕಗೆ ಕೇಂದ್ರ ಪದ್ಮಶ್ರೀ ಗೌರವ ನೀಡಿದೆ. ಮಹಾಲಿಂಗ ನಾಯ್ಕ ಅವರ ಈ ಸಾಧನೆಯನ್ನು ಬೆಳಕಿಗೆ ತಂದಿರುವ ಕೀರ್ತಿ ದೈಜಿವರ್ಲ್ಡ್ ಗೆ ಸಲ್ಲುತ್ತದೆ. ವಿಟ್ಲ ವರದಿಗಾರ ಮಹಮ್ಮದ್ ಅಲಿ ಮೊದಲ ಬಾರಿಗೆ ಮಹಾಲಿಂಗ ನಾಯ್ಕ ಅವರನ್ನು ಸಮಾಜಕ್ಕೆ ಪರಿಚಯಿಸಿದ್ದರು.
2018ರ ಡಿಸೆಂಬರ್ ತಿಂಗಳಲ್ಲಿ ಮಹಮ್ಮದ್ ಅಲಿಯವರು, ಸಾಧಕ ಮಹಾಲಿಂಗ ನಾಯ್ಕ ಅವರ ಸಾಧನೆಯತ್ತ ಬೆಳಕು ಚೆಲ್ಲಿದರು. 2019 ಜನವರಿ 1ರಂದು ದೈಜಿವರ್ಲ್ಡ್ ವಾಹಿನಿಯಲ್ಲಿ ಈ ಬಗ್ಗೆ ವರದಿ ಪ್ರಕಟಗೊಂಡಿತ್ತು. ಇದಾದ ಬಳಿಕ ವಿವಿಧ ವಾಹಿನಿಗಳು ಹಾಗೂ ಪತ್ರಿಕೆಗಳು ಮಹಾಲಿಂಗ ನಾಯ್ಕ ಅವರ ಸಾಧನೆಯ ವರದಿ ಪ್ರಕಟಿಸಿದರು.
ಸ್ಪೆಷಲ್ ರಿಪೋರ್ಟ್ ಮೂಲಕ ಮಹಾಲಿಂಗ ಪರಿಚಯ ಮಾಡಲಾಗಿತ್ತು. ಆ ಬಳಿಕ ಜಿಲ್ಲಾಡಳಿತ ತಾಲೂಕು ಆಡಳಿತ ಮಹಾಲಿಂಗ ನಾಯ್ಕ ಅವರನ್ನು ಗುರುತಿಸಿ ಪ್ರಶಸ್ತಿಗಾಗಿ ಸೂಚಿಸಿತ್ತು. ಅದರಂತೆ ಇದೀಗ ಪದ್ಮಶ್ರೀ ಗೌರವ ಲಭಿಸಿದೆ.