ಸುಳ್ಯ, ಜ. 25 (DaijiworldNews/SM): ತಂದೆ ಹಗೂ ಮಗನ ನಡುವೆ ಘರ್ಷಣೆಯುಂಟಾಗಿ ಹೊಡೆದಾಟ ನಡೆದ ಘಟನೆ ಸುಳ್ಯದ ಅಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ನಡೆದಿದೆ.
ತಂದೆ ಐತಪ್ಪ ನಾಯ್ಕ, ಮಗ ಜಯಪ್ರಕಾಶ್ ಮಧ್ಯೆ ಹೊಡೆದಾಟ ನಡೆದಿದೆ. ಹೊಡೆದಾಟದಲ್ಲಿ ಮಗ ಜಯಪ್ರಕಾಶ್ ಗಂಭೀರ ಗಾಯವಾಗಿದೆ. ಮಗನ ಎದೆ ಭಾಗಕ್ಕೆ ಕತ್ತಿಯಿಂದ ಕಡಿದು ತಂದೆ ಹಲ್ಲೆ ನಡೆಸಿದ್ದರೆ. ಗಂಭೀರ ಗಾಯಗೊಂಡ ಮಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರೂ ಮಧ್ಯ ಸೇವನೆಯ ಚಟ ಹೊಂದಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಇನ್ನು ತಂದೆ ಮಗನ ಜಗಳಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.