ವಿಟ್ಲ, ಜ. 25 (DaijiworldNews/SM): ಸುರಂಗ ಕೊರೆದು ಕೃಷಿ ಭೂಮಿಯನ್ನು ಹಸನಗಿಸಿದ್ದ ವಿಟ್ಲದ ಕೇಪು ಗ್ರಾಮದ ಅಮೈ ನಿವಾಸಿ ಪ್ರಗತಿಪರ ಕೃಷಿಕ ಮಹಾಲಿಂಗ ನಾಯ್ಕ್ ಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಮಹಾಲಿಂಗ ನಾಯ್ಕ್ ಅವರು ತಮ್ಮ ಕೃಷಿ ಜಮೀನಿಗೆ ನೀರಿಲ್ಲದ ಸಂದರ್ಭದಲ್ಲಿ ಏಕಾಂಗಿಯಾಗಿ ಸುರಂಗ ಕೊರೆದು ಹಲವು ವರ್ಷ ಶ್ರಮಪಟ್ಟ ಫಲವಾಗಿ ಅಂತಿಮವಾಗಿ ಒರತೆ ದೊರೆತು ನೀರ ಝರಿಯನ್ನು ಹರಿಸಿ ಕೃಷಿ ಭೂಮಿಗೆ ನೀರುಣಿಸಲು ಶಕ್ತರಾಗಿದ್ದಾರೆ.