ಕಾಸರಗೋಡು, ಜ 01 (DaijiworldNews/MS): ಬೈಕ್ ಅಪಘಾತದಲ್ಲಿ ಅರ್ಚಕರೋರ್ವರು ಮೃತಪಟ್ಟ ಘಟನೆ ಕಾಞಂಗಾಡ್ ಎಂಬಲ್ಲಿ ಜ.01 ರ ಶನಿವಾರ ನಡೆದಿದೆ . ಚೆರ್ವತ್ತೂರು ಶ್ರೀ ವೀರಭದ್ರ ದೇವಸ್ಥಾನದ ಅರ್ಚಕ ಕೆ ವೆಂಕಟೇಶ್ (50) ಮೃತಪಟ್ಟವರು.
ಇವರು ಇಂದು ಮುಂಜಾನೆ ದೇವಸ್ಥಾನಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಲಾಮಿಪಲ್ಲಿ ಎಂಬಲ್ಲಿ ಈ ಅಪಘಾತ ನಡೆದಿದೆ . ಎದುರಿನಿಂದ ತೆರಳುತ್ತಿದ್ದ ಲಾರಿ ಒಮ್ಮೆಲೆ ಬ್ರೇಕ್ ಹಾಕಿದಾಗ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಇವರು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶ್ರೀಕಾಂತ್’ರವರ ಸಹೋದರರಾಗಿದ್ದಾರೆ.
ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.