ಬಂಟ್ವಾಳ, ಡಿ. 31 (DaijiworldNews/SM): ಕುದ್ದುಪದವು ಪೆರುವಾಯಿ ರಸ್ತೆಯ ತಾಳಿಪಡ್ಪುವಿನಲ್ಲಿ ಎದುರಿನಿಂದ ಬರುವ ವಾಹನ ತಪ್ಪಿಸಲು ಹೋಗಿ ಕಾರು ರಸ್ತೆಯಿಂದ ಹಳ್ಳಕ್ಕೆ ಬಿದ್ದಿದೆ.
ಅಳಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಳಿಯ ನಿವಾಸಿ ಜಗದೀಶ ಶೆಟ್ಟಿ ಮುಳಿಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಮುಳಿಯದ ಮನೆಯಿಂದ ಕುದ್ದುಪದವು ಕಡೆಗೆ ಸಂಚರಿಸುವ ಸಂದರ್ಭ ಲಾರಿಯೊಂದನ್ನು ಹಿಂದಿಕ್ಕಿ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋದಾಗ ಘಟನೆ ನಡೆದಿದೆ.
ಗಾಯಗೊಂಡ ಅವರನ್ನು ತಕ್ಷಣ ವಿಟ್ಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಾರಿನ ಬಲ ಭಾಗ ಸಂಪೂರ್ಣ ಜಖಂಗೊಂಡಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.