ಉಡುಪಿ, ಡಿ 29 (DaijiworldNews/MS): 'ಸಾಂಕ್ರಾಮಿಕ ನಂತರ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಐಎಂಎಫ್ ಮತ್ತು ವಿಶ್ವಬ್ಯಾಂಕ್ನಂತಹ ಜಾಗತಿಕ ಏಜೆನ್ಸಿಗಳು ಗುರುತಿಸಿವೆ. ಕೊರೊನಾ ಬಳಿಕ ಜನರ ಉಳಿತಾಯ ಮತ್ತು ಹೂಡಿಕೆಯ ಸ್ವರೂಪದಲ್ಲಿ ಬದಲಾವಣೆಗಳಾಗಿವೆ. ಆರ್ಥಿಕತೆ ಅವಲಂಭಿಸಿರುವ ಎಲ್ಲಾ ವಲಯದಲ್ಲೂ ಪರಿವರ್ತನೆಗಳು ಘಟಿಸಿವೆ. ಸರಕಾರ ಜನರ ಭಾಗೀದಾರಿಕೆಯಲ್ಲಿ ಆಧಾರದಲ್ಲಿ ಭಾರತವು ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆಯಾಗಿದೆ 'ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಾಹೆ ವಿಶ್ವವಿದ್ಯಾಲಯದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (MIC)ಹೆಸರಾಂತ ಪತ್ರಕರ್ತ ಎಂ.ವಿ.ಕಾಮತ್ ಶತಮಾನೋತ್ಸವ ಸ್ಮರಣಾರ್ಥ ಕೆಎಂಸಿ ಮಣಿಪಾಲದ ಡಾ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳವಾರ ಆನ್ ಲೈನ್ ಮೂಲಕ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಸೀತಾರಾಮನ್ ಅವರು ""ಭಾರತ ಮತ್ತು ಸಾಂಕ್ರಾಮಿಕ ಅನಂತರದಲ್ಲಿ ಆರ್ಥಿಕ ಪ್ರಗತಿ" ಎಂಬ ವಿಚಾರದ ಕುರಿತು ಮಾತನಾಡಿದರು.
ಕೋವಿಡ್ ನಂತರದ ಹೊಸ ಉದ್ಯಮಗಳು ಮಾರುಕಟ್ಟೆಯಲ್ಲಿ ಭಾರತವನ್ನು ಮುನ್ನಡೆಸುತ್ತಿವೆ. ಮಾರುಕಟ್ಟೆಯಲ್ಲಿ ಹಣ ಸಂಗ್ರಹಿಸುವುದು ಸುಲಭದ ಕೆಲಸ. IPO ಗಳು ಮಾರುಕಟ್ಟೆಯಲ್ಲಿ ಸೂಚಕಗಳಾಗಿವೆ. ಉಳಿತಾಯ ಮತ್ತು ಹೂಡಿಕೆಯ ಸ್ವರೂಪ ಬದಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾರತ ಕೊರೊನಾ ಸಾಂಕ್ರಮಿಕದೊಂದಿಗೆ 2020 ರಲ್ಲಿ ದೇಶವು ಪ್ರಮುಖ ಐದು ಚಂಡಮಾರುತವನ್ನು ಎದುರಿಸಿತು. ನೈಸರ್ಗಿಕ ವಿಕೋಪ ಬರ, ಪ್ರವಾಹ ಮತ್ತು ಪೂರ್ವ ಮಾನ್ಸೂನ್ ನ್ನು ಕೂಡಾ ಎದುರಿಸುವ ಪರಿಸ್ಥಿತಿ ಬಂದೊದಗಿತ್ತು. ಇದು ಭಾರತದ ಆರ್ಥಿಕತೆಯ ಮೇಲೂ ದೊಡ್ಡ ಹೊಡೆತವನ್ನು ಬೀರಿತು. ಅದರು ಕೇಂದ್ರ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ಸಮರ್ಥ ಕ್ರಮಗಳನ್ನು ಕೈಗೊಂಡಿತ್ತು.
ಕೊರೊನಾ ಸಾಂಕ್ರಾಮಿಕವನ್ನು ಸವಾಲಾಗಿ ಸ್ವೀಕರಿಸಿ, ಅದರಿಂದ ಅನೇಕ ಅವಕಾಶಗಳನ್ನು ಸೃಷ್ಟಿಸಿಕೊಂಡು ವ್ಯಾಪಾರ, ಉದ್ಯಮ ರಂಗದಲ್ಲಿ ಅನೇಕರು ಸಾಧನೆ ಮಾಡಿದ್ದಾರೆ ಕೌಶಲ ಗಳಿಸಲು ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಹೆಚ್ಚಾಗುತ್ತಿದೆ. ಜಿಎಸ್ಟಿಯಿಂದ ಹೊರಗಿದ್ದ ಸಣ್ಣ, ಅತೀ ಸಣ್ಣ ವ್ಯಾಪಾರಸ್ಥರು ಜಿಎಸ್ಟಿ ಒಳಗೆ ಬಂದು, ಅದರ ಅನುಕೂಲ ಪಡೆಯುತ್ತಿದ್ದಾರೆ. ಹೂಡಿಕೆಗೂ ಆದ್ಯತೆ ನೀಡಲಾಗಿದ್ದು, ಪ್ರೊಡಕ್ಟಿವಿಟಿ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿಎಲ್ಐಎಸ್)ಗೆ 13 ವಲಯಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದರಿಂದ ಆರ್ಥಿಕತೆಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.