ಉಡುಪಿ, ಡಿ. 28 (DaijiworldNews/HR): ಜಿಲ್ಲೆಯಲ್ಲಿ ಈಗಾಗಲೇ ಇವತ್ತಿನಿಂದಲೇ ಸರಕಾರ ಆದೇಶದ ಪ್ರಕಾರ ಅಗತ್ಯ ಕ್ರಮಗಳನ್ನುತೆಗೆದುಕೊಳ್ಳಲಾಗಿದೆ ಎಂದು ಉಡುಪಿ ಎಸ್.ಪಿ ವಿಷ್ಣುವರ್ಧನ್ ಹೇಳಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಗಳ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು 25 ಚೆಕ್ ಪೋಸ್ಟ್ ಗಳು, 46 ಪಿಕೆಟಿಂಗ್ ಪಾಯಿಂಟ್ಸ್ ಗಳು, 800 ಹೆಚ್ಚಿನ ಸಿಬ್ಬಂದಿಗಳು, 70 ಕ್ಕೂ ಹೆಚ್ಚು ಮಂದಿ ಅಧಿಕಾರಿ, 5 ಡಿಎಆರ್, 1 ಕ್ವಿಕ್ ರೆಸ್ಪೋಂಡಿಂಗ್ ಟೀಮ್ ಮತ್ತು 3 ಇಂಟ್ರಾಸೆಪ್ಟರ್ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳ್ಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.