ಕಾರ್ಕಳ, ಡಿ 27 (DaijiworldNews/MS): ಸೂಡಾ ಕುದ್ರೆಬೆಟ್ಟು ಎಂಬಲ್ಲಿ ಕೀಟನಾಶಕ ಸೇವನೆಗೈದು ಯುವಕನೊಬ್ಬ ಆತ್ಮಹತ್ಯೆಗೈದ ಘಟನೆ ನಡೆದಿದೆ. ಜೋನ್ಸನ್ ಪಿರೇರಾ(23) ಎಂಬಾತ ಬದುಕಿಗೆ ಅಂತ್ಯ ಹೇಳಿದವನು.
ಡಿಸೆಂಬರ್ 18 ರ ರಾತ್ರಿ 11ರ ವೇಳೆಗೆ ತನ್ನ ಮನೆಯಲ್ಲಿ ಮಲ್ಲಿಗೆ ಗಿಡಕ್ಕೆ ಹಾಕುವ ಕೀಟನಾಶಕ ಸೇವಿಸಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಟಿಎಂಎ ಪೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಒಳರೋಗಿಯಾಗಿ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಜಾರಿಯಾಗದೇ ಡಿಸೆಂಬರ್ 25ರ ಮಧ್ಯಾಹ್ನ 1.30ಕ್ಕೆ ಸಾವನ್ನಪ್ಪಿದ್ದಾನೆಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.
ಮಾನಸಿಕ ಖಿನ್ನತೆ ಘಟನೆಗೆ ಕಾರಣವೆನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.