ಕಾಸರಗೋಡು, ಡಿ.26 (DaijiworldNews/SM): ದೇಶವನ್ನು ವಿಭಜಿಸುವ ಬಿಜೆಪಿ-ಆರ್ ಎಸ್ ಎಸ್ ಕೋಮುವಾದಿ ಶಕ್ತಿಗಳನ್ನು ನಿಗ್ರಹಿಸುವುದು ಇಂದಿನ ಅನಿವಾರ್ಯವಾಗಿದ್ದು, ದೇಶದ ಹಲವೆಡೆ ಇಂದು ಇಂತಹ ಕೋಮುವಾದಿಗಳಿಂದ ಅಲ್ಪಸಂಖ್ಯಾತರು ಭಯದಿಂದ ಬುದುಕುವ ವಾತಾವರಣ ಉಂಟಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯ ಪಟ್ಟರು.
ಅವರು ವಿದ್ಯಾನಗರ ಚಾಲದಲ್ಲಿ ನೂತನವಾಗಿ ನಿರ್ಮಿಸಿರುವ ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಾದ ಎ. ಕೆ. ಜಿ ಸ್ಮಾರಕ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಬಹುಸಂಖ್ಯಾತ ಮಾತ್ರವಲ್ಲ ಅಲ್ಪಸಂಖ್ಯಾತ ಕೋಮುವಾದವನ್ನು ಬೆಳೆಸಲು ಅವಕಾಶ ನೀಡಬಾರದು. ಮತೇತರತ್ವದಿಂದ ಕೋಮುವಾದವನ್ನು ಹೋಗಲಾಡಿಸಲು ಸಾಧ್ಯ. ಕಾಂಗ್ರೆಸ್ ಇಂದು ಅನುಸರಿಸುತ್ತಿರುವ ನೀತಿಗಳಿಂದ ಬಿಜೆಪಿ ಬೆಳೆಯಲು ಅವಕಾಶ ಲಭಿಸುತ್ತಿದೆ ಎಂದು ಹೇಳಿದರು.
ಕೋಮುವಾದ, ಆರ್ಥಿಕತೆ ಮುಗ್ಗಟ್ಟನ್ನು ಎದುರಿಸಲು ಕಾಂಗ್ರೆಸ್ ವಿಫಲಗೊಂಡಿದೆ. ದೇಶದಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಉಂಟಾಗಿದೆ. ಆಯಾ ರಾಜ್ಯ ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ದ ಪ್ರಾದೇಶಿಕ ಪಕ್ಷಗಳು ಬೆಳೆಯಬೇಕು. ಈ ಪ್ರಾದೇಶಿಕ ಪಕ್ಷಗಳಿಗೆ ಸಿಪಿಐಎಂ ಬೆಂಬಲ ನೀಡಲಿದೆ ಎಂದು ಹೇಳಿದರು. ಕಾಂಗ್ರೆಸ್ ಜಾರಿಗೆ ತಂದ ಜಾಗತೀಕರಣ ದಂತಹ ನೀತಿಗಳನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ. ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದು ಅಪಾಯಕಾರಿ ಎಂದು ಹೇಳಿದರು
ಸಮಾರಂಭದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿ ಯೇರಿ ಬಾಲಕೃಷ್ಣನ್, ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಎ. ವಿಜಯ ರಾಘವನ್, ಮಾಜಿ ಸಚಿವೆ ಶೈಲಜಾ ಟೀಚರ್, ಎಂ.ವಿ ಗೋವಿಂದ ನ್, ಪಿ. ಜಯರಾಜನ್, ಇ. ಪಿ ಜಯರಾಜನ್, ಶಾಸಕರಾದ ಸಿ. ಎಚ್ ಕುಂಚಿಂಬು, ಎಂರಾಜಗೋಪಾಲ್, ಮಾಜಿ ಸಂಸದ ಪಿ.ಕರುಣಾಕರನ್, ಜಿಲ್ಲಾ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
2019 ರ ಫೆಬ್ರವರಿ 22 ರಂದು ಪಿಣ ರಾಯಿ ವಿಜಯನ್ ಉ ದ್ಘಾ ಟಿ ಸಿದ್ದರು. ಕಳೆದ ಮೂವತ್ತು ವರ್ಷಗಳಿಂದ ವಿದ್ಯಾನಗರ ದಲ್ಲಿದ್ದ ಕಚೇರಿಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನಲೆ ಯಲ್ಲಿ ತೆರವು ಗೊಳಿಸ ಬೇಕಾಗಿ ಬಂದುದರಿಂದ ಕಚೇರಿ ಯನ್ನು ‘ಚಾಲ’ಕ್ಕೆ ಸ್ಥಳಾಂತರಿಸಿದ್ದು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೂತನ ಕಚೇರಿ ಕಟ್ಟಡ ನಿರ್ಮಿಸಲಾಗಿದೆ.