ಉಡುಪಿ, ಡಿ. 26 (DaijiwoldNews/HR): ಹೊಸ ವರ್ಷಾಚರಣೆ ವೇಳೆ ಬಾರ್, ಪಬ್ ರೆಸ್ಟೋರೆಂಟ್ ಅನ್ನು ನಿರ್ಬಂಧಿಸಿದ್ದು, ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, 10 ಗಂಟೆಗೆ ಬಂದ್ ಮಾಡಲು ಆದೇಶಿಸಿದ್ದು, ಶೇ 50 ಗ್ರಾಹಕರಿಗೆ ಮಾತ್ರ ಅವಕಾಶ ಎಂದು ಹೇಳಿದೆ. ಎರಡು ವರ್ಷ ಪಟ್ಟ ಬವಣೆಯನ್ನು ನಿಮಗೆ ಮನವಿಯಲ್ಲಿ ತಿಳಿಸಿದ್ದೇವೆ. ಮೌಖಿಕವಾಗಿಯೂ ಬಂದು ನಮ್ಮ ಸಂಕಷ್ಟ ಹೇಳಿಕೊಂಡಿದ್ದೇವೆ. ಐದು ಸಾವಿರಕ್ಕೂ ಮಿಕ್ಕಿ ಬಾರ್ ಅಂಡ್ ರೆಸ್ಟೋರೆಂಟ್ ಗಳಿದ್ದು ನಾವು ಲಾಕ್ಡೌನ್ ವೇಳೆ ನಾವು ತುಂಬಾ ನಷ್ಟ ಅನುಭವಿಸಿದ್ದೇವೆ" ಎಂದರು.
ಇನ್ನು "ನೀವು ಕೇವಲ ಸರ್ಕಾರದ ಆದಾಯವನ್ನು ಲೆಕ್ಕ ಹಾಕುತ್ತೀರಿ. ನಮಗೆ ಆಗಿರುವ ನಷ್ಟವನ್ನು ಯಾರು ಲೆಕ್ಕ ಹಾಕಿ.ಲ್ಲ ನಷ್ಟ ಸರಿದೂಗಿಸಿಕೊಳ್ಳಲು ಅವಕಾಶ ಕೊಡಿ. ಡಿ.31ಮತ್ತು ಜ 1 ರಂದು ಪೂರ್ಣಾವಧಿ ಮಾರಾಟಕ್ಕೆ ಅವಕಾಶ ಕೊಡಿ. ಈ ಆದೇಶದಿಂದ ನಮಗೆ ಅನ್ಯಾಯವಾಗಿದೆ" ಎಂದಿದ್ದಾರೆ.
ರಸ್ತೆಯಲ್ಲಿ ನಡೆಯುವ ಆಚರಣೆಗಳನ್ನು ನಿರ್ಬಂಧಿಸಿ ನಮ್ಮ ಅಡ್ಡಿಯಿಲ್ಲ. ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಲೈಸೆನ್ಸುದಾರರು ಚೇತರಿಸಿಕೊಳ್ಳುತ್ತೇವೆ. ನಮಗೆ ವ್ಯಾಪಾರ ನಡೆಯುವುದೇ ಈ ಎರಡು ದಿನಗಳಲ್ಲಿ. ಮುಖ್ಯಮಂತ್ರಿಗಳೇ, ಅಬಕಾರಿ ಸಚಿವರು ಇತ್ತ ಗಮನಹರಿಸಿ. ನೌಕರರ ಕಷ್ಟಗಳನ್ನು ಕೂಡ ಗಮನಿಸಿ. ದಯವಿಟ್ಟು ಆದೇಶದಲ್ಲಿ ಮಾರ್ಪಾಟುಗಳನ್ನು ಮಾಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.