ಪುತ್ತೂರು, ಡಿ. 25 (DaijiworldNews/HR): ಚುನಾವಣೆಯಲ್ಲಿ ಸೋಲುವ ಭಯದಲ್ಲಿ ವಿರೋಧ ಪಕ್ಷಗಳು ಮತಾಂತರ ನಿಶೇಷ ಕಾಯ್ದೆ ವಿರೋಧಿಸುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಎಲ್ಲಾ ಪಕ್ಷಗಳಿಗೂ ಮತಾಂತರ ಕಾಯ್ದೆ ತಂದಿರುವುದ ಖುಷಿ ತಂದಿದೆ. ಆದರೆ ಚುನಾವಣೆಯಲ್ಲಿ ತಮಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ವಿರೋಧಿಸುತ್ತಿದೆ" ಎಂದರು.
"ಜೆಡಿಎಸ್ ಪಕ್ಷದ ಹಿರಿಯ ಶಾಸಕರೇ ಈ ಕಾಯ್ದೆಯ ಪರವಾಗಿದ್ದಾರೆ. ನನ್ನ ಬಳಿಯೇ ಹಿರಿಯ ಶಾಸಕರೊಬ್ಬರು ಈ ವಿಚಾರ ತಿಳಿಸಿದ್ದು, ಆ ಶಾಸಕನ ಕ್ಷೇತ್ರದಲ್ಲಿ 16 ಸಾವಿರ ಹಿಂದೂಗಳ ಮತಾಂತರವಾಗಿದೆ. ಆದರೆ ಕಾಯ್ದೆ ಪರವಾಗಿ ಮಾತನಾಡಿದರೆ ಅದು ಚುನಾವಣೆಯಲ್ಲಿ ತೊಂದರೆಯಾಗುತ್ತದೆ ಎಂದಿದ್ದಾರೆ" ಎಂದರು.
ಇನ್ನು ಈ ಕಾಯ್ದೆಯಿಂದ ಎಲ್ಲರಿಗೂ ಒಳಿತಾಗಲಿದೆ. ಮತಾಂತರದ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಧರ್ಮ ರಕ್ಷಣೆಗಾಗಿ ಚುನಾವಣೆಯಲ್ಲಿ ಸಮಸ್ಯಯಾಗುತ್ತದೆ ಎನ್ನುವುದನ್ನು ಯೋಚಿಸೋದು ತಪ್ಪು. ಚುನಾವಣೆ ಮುಖ್ಯವಲ್ಲ,ಮುಂದಿನ ದೇಶದ ಭವಿಷ್ಯ ಮುಖ್ಯ" ಎಂದು ಹೇಳಿದ್ದಾರೆ.