Karavali
ಬೆರಳೆಣಿಕೆಯ ಸಂಖ್ಯೆಯಲ್ಲಿರುವ ನಕ್ಸಲೀಯರು - ಮನವೊಲಿಸಿ ಶರಣಾಗಿಸಲು ಪ್ರಯತ್ನಿಸಿದ ಪೊಲೀಸರು
- Sat, Dec 25 2021 06:39:22 PM
-
ವರದಿ: ಆರ್.ಬಿ.ಜಗದೀಶ್ ಕಾರ್ಕಳ
ಕಾರ್ಕಳ, ಡಿ. 25 (DaijiworldNews/HR): ಪಶ್ಚಿಮ ಘಟ್ಟ ಉಳಿವಿಗಾಗಿ ನಡೆಸಿದ ಹೋರಾಟವು ತೀವ್ರ ಸ್ವರೂಪ ಪಡೆದು ನಕ್ಸಲೀಯರ ತಂಡವು ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಬೇರೂರಿತು. ಸರಕಾರಕ್ಕೆ ಇದರಿಂದ ಜಟಿಲ ಸಮಸ್ಸೆ ಎದುರಾಗಿತ್ತು. ಪೊಲೀಸರು ನಡೆಸಿದ ದಾಳಿಗೆ ಕೆಲ ನಕ್ಸಲೀಯರು ಪ್ರಾಣ ಕಳೆದುಕೊಂಡಿದ್ದು, ಇನ್ನು ನಕ್ಸಲೀಯರು ನಡೆಸಿರುವ ದಾಳಿಗೆ ಕೆಲವು ನಾಗರಿಕರು ಸಾವನೊಪ್ಪಿದರು. ಕೆಲ ನಕ್ಸಲೀಯರು ಬಂಧನಕೊಳ್ಳಗಾದರೆ, ಸಮಾಜಮುಖಿ ಚಿಂತಕರು ನಡೆಸಿದ ಮಾತುಕತೆ ಫಲಪ್ರದವಾಗಿ ಕೆಲವರಂತು ಮುಖ್ಯವಾಹಿನಿಗೆ ಸೇರ್ಪಡೆಗೊಂಡಿದ್ದಾರೆ. ಬೆರಳೆಣಿಕೆಯ ಮಂದಿ ನಕ್ಸಲ್ ಚಟುವಟಿಕೆಯಲ್ಲಿ ಇನ್ನೂ ತೊಡಗಿಸಿಕೊಂಡಿದ್ದು, ಅವರೆಲ್ಲ ಶರಣಾಗತಿಗೆ ಪೊಲೀಸ್ ಇಲಾಖೆ ಮೊದಲ ಆದ್ಯತೆ ನೀಡಿದೆ.
ಪ್ರಕಾಶ್ ನಿಕಮ್, ಎಎನ್ಎಫ್ ಎಸ್ಪಿಸರ್ಕಾರ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನಾ ಪತ್ರದಲ್ಲಿ 22 ಜನರ ಭಾವಚಿತ್ರವಿತ್ತು. ಅವರಲ್ಲಿ ಕೆಲವರು ಎನ್ಕೌಂಟರ್ಗೆ ಬಲಿಯಾದರೆ, ಇನ್ನೂ ಕೆಲವರು ಶರಣಾಗತಿಯಾಗಿದ್ದಾರೆ. ಈ ಸಂಖ್ಯೆ 12 ಉಳಿದ 10 ಮಂದಿಯಲ್ಲಿ ಎಂಟು ಮಂದಿ ಇನ್ನೂ ಸಕ್ರಿಯರಾಗಿದ್ದಾರೆ.
ನಕ್ಸಲ್ ನಾಯಕನಾಗಿದ್ದ ಬಿ.ಜಿ.ಕೃಷ್ಣಮೂರ್ತಿ, ಕಬಿನಿ ದಳದ ಕಮಾಂಡರ್ ಸಾವಿತ್ರಿ ಬಂಧನ ಹಾಗೂ ಹೊಸಗದ್ದೆ ಪ್ರಭಾ ಶರಣಾಗತಿ ಬಳಿಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಬಹುತೇಕ ನಿಂತೇ ಹೋಯಿತು ಎಂದು ಹೇಳಲಾಗುತ್ತಿರುವ ನಡುವೆಯೇ ಹಲವು ನಕ್ಸಲರು ಇನ್ನೂ ಪತ್ತೆಗೆ ಬಾಕಿ ಇರುವ ಮಾಹಿತಿ ಲಭಿಸಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಗಡಿಭಾಗದಲ್ಲಿ ಇವರು ಸಕ್ರಿಯರಾಗಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಇವರಲ್ಲಿ ಪ್ರಮುಖ ಹೆಸರು ಉಡುಪಿ ಜಿಲ್ಲೆ ಹೆಬ್ರಿಯ ಕೂಡ್ಲು ನಾಡ್ಪಾಲು ಗ್ರಾಮದ ವಿಕ್ರಮ್ ಗೌಡ ಆಲಿಯಾಸ್ ಶ್ರೀಕಾಂತ್. ಈತ ಕೇರಳದ ವಯನಾಡ್- ಕೋಯಿಕ್ಕೋಡ್ನಲ್ಲಿ ಚಟುವಟಿಕೆ ನಡೆಸುತ್ತಿರುವ ಕಬಿನಿ ದಳದ ಮುಖ್ಯಸ್ಥ. ಈತನ ಪತ್ನಿ ಸಾವಿತ್ರಿ ಕೇರಳ ಪೊಲೀಸರ ವಶದಲ್ಲಿದ್ದಾಳೆ. ವಿಕ್ರಮ್ ಗೌಡನ ಸುಳಿವು ನೀಡಿದವರಿಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿದೆ.
ಉಳಿದಂತೆ ಚಿಕ್ಕಮಗಳೂರಿನ ಮೂಡಿಗೆರೆ ಅಂಗಡಿ ಗ್ರಾಮದ ನಿವಾಸಿ ಎ.ಎಸ್.ಸುರೇಶ ಅಲಿಯಾಸ್ ಮಹೇಶ್ ಅಲಿಯಾಸ್ ಪ್ರದೀಪ ಅಲಿಯಾಸ್ ತುಂಗಪ್ಪ ಅಲಿಯಾಸ್ ಮಹದೇವ, ಚಿಕ್ಕಮಗಳೂರು ಬುಕ್ಕಡಿಬೈಲು ಮುಂಡಗಾರಿನ ಲತಾ ಆಲಿಯಾಸ್ ಲೋಕಮ್ಮ ಆಲಿಯಾಸ್ ಶ್ಯಾಮಲಾ ಇನ್ನೂ ಪತ್ತೆಯಾಗಿಲ್ಲ. ಇವರ ಸುಳಿವಿಗೂ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಕೊಡಗೆ ಹಿತ್ತಲಮನೆಯ ರವೀಂದ್ರ ಆಲಿಯಾಸ್ ಕೋಟೆಹೊಂಡ ರವಿ, ರಾಯಚೂರು ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಹೇಶ್, ಚಿಕ್ಕಮಗಳೂರು ಬಾಳೆಹೊಳೆ ಎಂ.ವನಜಾಕ್ಷಿ ಅಲಿಯಾಸ್ ಕಲ್ಪನಾ, ಬೆಳ್ತಂಗಡಿಯ ಕುತ್ಲೂರಿನ ಸುಂದರಿ ಆಲಿಯಾಸ್ ಗೀತಾ ಅಲಿಯಾಸ್ ಸಿಂಧು (2010ರಲ್ಲಿ ಹೆಬ್ರಿ ಎನ್ಕೌಂಟರ್ನಲ್ಲಿ ಬಲಿಯಾದ ವಸಂತನ ಸಹೋದರಿ) ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಸಾವಿನ ಸುದ್ದಿನ ನಡುವೆ ಎದ್ದು ಬಂದ ಪ್ರಭಾ:
ಪಶ್ಚಿಮಘಟ್ಟದಲ್ಲಿ ಬೇರೂರಿದ್ದ ನಕ್ಸಲ್ ಚಳವಳಿಯಲ್ಲಿ ಆಗುಂಬೆ ಹೊಸಗದ್ದೆಯ ಪ್ರಭಾಳದ್ದು ಪ್ರಮುಖ ಪಾತ್ರವಿತ್ತು. ಈಕೆ ಬಿ.ಜಿ.ಕೃಷ್ಣಮೂರ್ತಿಯ ಪತ್ನಿ. ಪತ್ತೆ ಸಾಧ್ಯವಾಗದ ಪೊಲೀಸರು ಆಕೆ ಸತ್ತು ಹೋಗಿದ್ದಳೆಂದು ಶಂಕಿಸಿದ್ದರು. ಅದು ಬಿ.ಜಿ.ಕೃಷ್ಣಮೂರ್ತಿಯ ಬಂಧನ ಬಳಿಕ ಹುಸಿಯಾಗಿದೆ. ಬೆನ್ನಲ್ಲೇ ಆಕೆ ಡಿ.18ರಂದು ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಾಳೆ. ಆ ಮೂಲಕ 20ವರ್ಷಗಳ ಭೂಗತ ತೀವ್ರವಾದಕ್ಕೆ ಇತಿಶ್ರೀ ಹಾಡಿದ್ದಾಳೆ. ಪಾರ್ಶ್ವವಾಯು ಸಹಿತ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಪತಿಯ ಬಂಧನ ಬಳಿಕ ದಾರಿ ಕಾಣದೆ ಮುಖ್ಯವಾಹಿನಿಗೆ ಮರಳಿದ್ದಾಳೆ.
ಕೃಷ್ಣಮೂರ್ತಿ ಎಲ್ಎಲ್ಬಿ ಪದವೀಧರ:
ಶೃಂಗೇರಿ ಮೂಲದ ಬಿ.ಜಿ.ಕೃಷ್ಣಮೂರ್ತಿ ಶಿವಮೊಗ್ಗ ಜೆಸಿಬಿಎಂ ಕಾಲೇಜಿನಲ್ಲಿ ಪದವಿ, ಬಳಿಕ ಎಲ್ಎಲ್ಬಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದ. ವಿದ್ಯಾರ್ಥಿ ದಿಸೆಯಲ್ಲಿ ಎಡವಾದಿ ಚಿಂತನೆಗಳಿಂದ ಪ್ರೇರಿತನಾಗಿ 2000 ಇಸವಿ ಆಸುಪಾಸಿನಲ್ಲಿ ನಡೆದಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಚಳವಳಿಯಲ್ಲಿ ಸಕ್ರಿಯನಾಗಿದ್ದ. 2003ರಿಂದ ಭೂಗತನಾಗಿ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ. ಪಶ್ಚಿಮಘಟ್ಟ ಚಳವಳಿಯಲ್ಲಿ ವಿಶೇಷ ವಲಯ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ. 2005ರಲ್ಲಿ ಸಾಕೇತ್ ರಾಜನ್ ಹತ್ಯೆ ಬಳಿಕ ನಾಯಕತ್ವ ಕೃಷ್ಣಮೂರ್ತಿ ಹೆಗಲೇರಿತ್ತು. 2018ರಲ್ಲಿ ತಂದೆ ಗೋಪಾಲ ರಾವ್ ನಿಧನರಾದಾಗ ಪೊಲೀಸರು ಸಿದ್ಧರಾಗಿದ್ದರಾದರೂ ಕೃಷ್ಣಮೂರ್ತಿ ಬಂದಿರಲಿಲ್ಲ. ಮೈಸೂರಿನಲ್ಲೇ ಓಡಾಡಿಕೊಂಡಿದ್ದ ಈತ ಸಾಗುತ್ತಿದ್ದ ಕಾರು ವಯನಾಡ್ನಲ್ಲಿ ನ.9ರಂದು ಕೆಟ್ಟು ನಿಂತಿದ್ದು, ಹಿಂಬಾಲಿಸುತ್ತಿದ್ದ ಕೇರಳ ಎಟಿಎಸ್ ಡ್ರಾಪ್ ಕೊಡುವ ನೆಪದಲ್ಲಿ ಹತ್ತಿಸಿಕೊಂಡು ಸಾವಿತ್ರಿ ಸಹಿತ ಬಂಧಿಸಿತ್ತು.
ಬಂಧನಕ್ಕೊಳಗಾದವರು:
ಸೊರಬದ ದೇವೇಂದ್ರ ಆಲಿಯಾಸ್ ವಿಷ್ಣು ಅಲಿಯಾಸ್ ವಿಕ್ರಮ, ಭದ್ರಾವತಿಯ ಆಶಾ, ಚಿಕ್ಕಮಗಳೂರು ಕೊಪ್ಪದ ಸೋಮಲಾಪುರದ ಎನ್.ನಂದಕುಮಾರ್ ಆಲಿಯಾಸ್ ರಂಗಪ್ಪ ಆಲಿಯಾಸ್ ರಂಗನಾಥ, ಮಾವಿನಕೆರೆಯ ಕನ್ಯಾಕುಮಾರಿ ಆಲಿಯಾಸ್ ಕನ್ಯಾ ಅಲಿಯಾಸ್ ಸುವರ್ಣ ಪೊಲೀಸರಿಂದ ವಿವಿಧ ಹಂತಗಳಲ್ಲಿ ಬಂಧನಕ್ಕೊಳಗಾಗಿದ್ದಾರೆ.
ನಕ್ಸಲ್ ದಾಳಿಗೆ ಸಾವನೊಪ್ಪಿದ ಸೀತಾನದಿ ಭೋಜ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಜೀವ ತುಮಕೂರು ಪಾವಗಡದಲ್ಲಿ 18 ಪೊಲೀಸರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಆತನನ್ನು ಅಂದಿನ ಎಎಸ್ಪಿ ಸಮನಾ ನೇತೃತ್ವದಲ್ಲಿ ಕಾರ್ಕಳದ ಪೊಲೀಸರು ಬಂಧಿಸಿದ್ದರು.
ಶರಣಾದವರು:
ರಾಜ್ಯದಲ್ಲಿ ಎರಡು ದಶಕಗಳ ಹಿಂದೆ ನಕ್ಸಲ್ ಚಳವಳಿಯನ್ನು ತೀವ್ರಗೊಳಿಸಿದವರಲ್ಲಿ ಮೊದಲಿಗ ನೀಲಗುಳಿ ಪದ್ಮನಾಭ. ಆಂಧ್ರದಲ್ಲಿ ತರಬೇತಿ ಪಡೆದು ಇಲ್ಲಿ ಯುವ ಸಮುದಾಯವನ್ನು ಸೆಳೆಯುತ್ತಿದ್ದ. ಚಿಕ್ಕಮಗಳೂರಿನ ಬರ್ಕಣ ಎನ್ಕೌಂಟರ್ನಲ್ಲಿ ಗಾಯಗೊಂಡು ಕಾಲಿನ ಶಕ್ತಿ ಕಳೆದುಕೊಂಡಿದ್ದ. 2016ರಲ್ಲಿ ನೀಲಗುಳಿ ಪದ್ಮನಾಭ, ರಾಯಚೂರು ಕುರ್ತುಕುಂದದ ರಿಜ್ವಾನ ಬೇಗಂ, ಪರಶುರಾಮ್, ಭಾರತಿ ಎಂಬ ನಾಲ್ವರು ನಕ್ಸಲರು ಚಿಕ್ಕಮಗಳೂರಿನಲ್ಲಿ ಶರಣಾದರು. ೨೦೧೪ರಲ್ಲಿ ಸಿರಿಮನೆ ನಾಗರಾಜ, ನೂರ್ ಶ್ರೀಧರ್ ಶರಣಾದರು. ಜಯ, ಮಲ್ಲಿಕಾ, ಯಡಗುಂದದ ಕೋಮಲಾ, ಹಾಗಲಗಂಚಿ ವೆಂಕಟೇಶ್ ಕೂಡ ಮುಖ್ಯವಾಹಿನಿಗೆ ಸೇರ್ಪಡೆಗೊಂಡರು. ಇವರಲ್ಲಿ ಆಂದ್ರಪ್ರದೇಶದಲ್ಲಿ ತರಬೇತಿ ಪಡೆದವರು ಇದ್ದರು.
2016 ನವಂಬರ್ ಎರಡನೇಯ ವಾರದಂದು ನೀಲಗುಳಿ ಪದ್ಮನಾಭ, ರಾಯಚೂರು ಕುರ್ತುಕುಂದದ ರಿಜ್ವಾನ ಬೇಗಂ, ಪರಶುರಾಮ್, ಭಾರತೀ ಸೇರಿದಂತೆ ನಾಲ್ವರು ನಕ್ಸಲ್ವಾದಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿ ಜಿ.ಸತ್ಯವತಿ ಸಮ್ಮುಖದಲ್ಲಿ ಶರಣಾಗತಿಯಾಗಿದ್ದರು. ಇವರನ್ನು ಮುಖ್ಯವಾಹಿನಿಗೆ ಕರೆ ತರುವಲ್ಲಿ ಶ್ರಮಿಸಿದವರಲ್ಲಿ ಪತ್ರಕರ್ತೆ ಹಾಗೂ ಉನ್ನತ ನಾಗರಿಕ ಸಮಿತಿಯ ಗೌರಿ ಲಂಕೇಶ್, ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ವಕೀಲ ಕೆ.ಪಿ.ಪಾಲ್ ನೇತೃತ್ವ ವಹಿಸಿದ್ದರು. ಅಂದು ಕರ್ತವ್ಯ ನಿರ್ವಹಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಪೊಲೀಸ್ ವೃತ್ತನಿರೀಕ್ಷಕ ಪ್ರಮೋದ್ ಪಿ ಮೊದಲಾದವರು ಉಪಸ್ಥಿತರಿದ್ದರು.
2014 ಡಿಸೆಂಬರ್ ರಂದು ನಕ್ಸಲ್ವಾದಿಗಳ ನೇತಾರರಾದ ಸಿರಿಮನೆ ನಾಗರಾಜ,ನೂರ್ ಶ್ರೀಧರ್ ಜಿಲ್ಲಾಡಳಿತಕ್ಕೆ ಶರಣಾದರು. ಇವರು ಮುಖ್ಯವಾಹಿನಿಗೆ ಬರುವಲ್ಲಿ ಶ್ರಮಿಸಿದವರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಹೆಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್, ಶಿವಸುಂದರ್, ನಗರಿ ಬಾಬಯ್ಯ ಒಳಗೊಂಡಿದ್ದರು.
ಗುರುತು ಪತ್ತೆಗಾಗಿ ರೂ10 ಲಕ್ಷ ಘೋಷಣೆ:
ಕಾನೂನು ಬಾಹಿರ ಹಾಗೂ ವಿಧ್ವಂಸಕ ಕೃತ್ಯವೆಸಗಿ ಸಾರ್ವಜನಿಕರಿಗೆ ಆತಂಕ ಮೂಡಿಸುತ್ತಿರುವ ನಕ್ಸಲರ ಬಂಧನಕ್ಕೆ ಅನುವಾಗುವ ಮಾಹಿತಿ ನೀಡುವವರಿಗೆ ಕರ್ನಾಟಕ ಸರಕಾರವು ಲಕ್ಷ ಮೊತ್ತ ಘೋಷಿಸಿದೆ.
ಇನ್ನೂ 10 ಮಂದಿ ನಕ್ಸಲರು ಬಾಕಿ:
ಸರಕಾರ ಮೊದಲ ಹಚಿತದಲ್ಲಿ ಬಿಡುಗಡೆ ಮಾಡಿದ ಸೂಚನಾ ಪತ್ರದಲ್ಲಿ 22 ಮಂದಿಗಳ ಭಾವಚಿತ್ರಗಳು ಇತ್ತಾದರೂ, ಅವರಲ್ಲಿ ಕೆಲವರು ಎನ್ಕೌಂಟರ್ಗೆ ಬಲಿಯಾದರೆ, ಇನ್ನೂ ಕೆಲವರು ಶರಣಾಗತಿಯಾಗಿದ್ದಾರೆ. ಉಳಿದ ಹತ್ತು ಮಂದಿಯರಲ್ಲಿ ಮೂವರ ಕುರಿತು ಸ್ವಷ್ಟ ಮಾಹಿತಿ ಇಲ್ಲ. ಉಳಿದ ಏಳು ಮಂದಿ ಪೊಲೀಸರಿಗೆ ಬೇಕಾಗಿದವರಾಗಿದ್ದಾರೆ.
ಶಿವಮೊಗ್ಗ ಸೊರಬದ ತಲ್ಲೂರು ಗ್ರಾಮ ದೇವೇಂದ್ರ ಅಲಿಯಾಸ್ ವಿಷ್ಣು ಅಲಿಯಾಸ್, ವಿಕ್ರಮ, ಚಿಕ್ಕಮಗಳೂರು ಬುಕ್ಕಡಿಬೈಲು ಮುಂಡಗಾರಿನ ಲತಾ ಆಲಿಯಾಸ್ ಲೋಕಮ್ಮ ಆಲಿಯಾಸ್ ಶ್ಯಾಮಲಾ, ಉಡುಪಿ ಹೆಬ್ರಿಯ ಕೂಡ್ಲು ನಾಡ್ಪಾಲು ಗ್ರಾಮದ ವಿಕ್ರಮ ಆಲಿಯಾಸ್ ಶ್ರೀಕಾಂತ್ ಇವರ ಸುಳಿವು ನೀಡಿದವರಿಗೆ 1 ರೂ. ಲಕ್ಷ ಬಹುಮಾನವನ್ನು ಈ ಹಿಂದೆ ಕರ್ನಾಟಕ ಸರಕಾರ ಘೋಸಿಸಿದೆ.
ಕೊಡಗೆ ಹಿತ್ತಲಮನೆಯ ರವೀಚಿದ್ರ ಆಲಿಯಾಸ್ ಕೋಟೆಹೊಂಡ ರವಿ, ರಾಯಚೂರು ಜಯಣ್ಣ ಆಳಿಯಾಸ್ ಜಾನ್ ಆಲಿಯಾಸ್ ಮಹೇಶ್, ಚಿಕ್ಕಮಗಳೂರು ಬಾಳೆಹೊಳೆ ಭರ್ಧಋರ್ಶಯಠೂ ಎಂ. ವನಜಾಕ್ಷಿ ಅಲಿಯಾಸ್ ಕಲ್ಪನಾ, ಬೆಳ್ತಂಗಡಿಯ ಕುತ್ಲೂರು ಸುಂದರಿ ಆಲಿಯಾಸ್ ಗೀತಾ ಇವರ ಕುರಿತು ಮಾಹಿತಿ ನೀಡಿದವರಿಗೆ ತಲಾ ರೂ.1ಲಕ್ಷ ವನ್ನು ಸರಕಾರ ಈ ಹಿಂದೆ ಘೋಷಿಸಿದೆ.
ಛತ್ತೀಸ್ಗಢದ ಮನೋಜ್, ಭಾರತೀ ಅಲಿಯಾಸ್ ದೀಪಾ, ದೀಪಾ ಇವರ ಕುರಿತು ನಿಖರ ಮಾಹಿತಿ ಇಲ್ಲದಿದ್ದರೂ ಇವರ ಕುರಿತು ಮಾಹಿತಿ ನೀಡಿದವರಿಗೆ ತಲಾ ರೂ. 1 ಲಕ್ಷವನ್ನು ಸರಕಾರ ಈ ಹಿಂದೆ ಘೋಷಿಸಿದೆ.
ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಶಿವಮೊಗ್ಗದ ಸೊರಬದ ದೇವೇಂದ್ರ, ಆಲಿಯಾಸ್ ವಿಷ್ಣು ಅಲಿಯಾಸ್ ವಿಕ್ರಮ ಚಿಕ್ಕಮಗಳೂರು ಕೊಪ್ಪದ ಸೋಮಲಾಪುರದ ಎನ್. ನಂದಕುಮಾರ್, ಆಲಿಯಾಸ್ ರಂಗಪ್ಪ ಆಲಿಯಾಸ್ ರಂಗನಾಥ, ಚಿಕ್ಕಮಗಳೂರು ಮಾವಿನಕೆರೆಯ ಕನ್ಯಾಕುಮಾರಿ ಆಲಿಯಾಸ್ ಕನ್ಯಾ ಆಲಿಯಾಸ್ ಸುವರ್ಣ, ಶಿವಮೊಗ್ಗದ ಭದ್ರಾವತಿಯ ಆಶಾ ಎಂಬವರ ಬಂಧನ ವಿವಿಧ ಹಂತದಲ್ಲಿ ವಿವಿದೆಡೆಗಳಲ್ಲಿ ಪೊಲೀಸರು ನಡೆಸಿದ್ದಾರೆ.ಎನ್ಕೌಂಟರ್ಗಳು:
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯ ಮುಂದಾಳು ಸಾಕೇತ್ ರಾಜನ್ ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ 2005ರಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿಯಾಗಿದ್ದ. 2003 ನ.17ರಂದು ಕಾರ್ಕಳ ತಾಲೂಕು ಈದು ಬಲ್ಲೊಟ್ಟು ರಾಮಪ್ಪ ಪೂಜಾರಿ ಅವರ ಮನೆ ಬಳಿ ಎನ್ಕೌಂಟರ್ಗೆ ರಾಯಚೂರಿನ ಹಾಜಿಮಾ, ಕೊಪ್ಪದ ಪಾರ್ವತಿ ಬಲಿಯಾಗಿದ್ದರು. ಮೂಡಿಗೆರೆ ಕಳಸದ ಯಶೋಧಾ ಗುಂಡೇಟು ತಗುಲಿ ಬದುಕಿ ಉಳಿದಿದ್ದು, ನಂತರ ನ್ಯಾಯಾಲಯದಲ್ಲಿ ಖುಲಾಸೆಗೊಂಡಳು. 2010 ರಲ್ಲಿ ಹೆಬ್ರಿ ಮುಟ್ಲುಪ್ಪಾಡಿ ಎನ್ಕೌಂಟರಿನಲ್ಲಿ ಕುತ್ಲೂರಿನ ವಸಂತ ಬಲಿಯಾಗಿದ್ದ. 2012ರಲ್ಲಿ ಸುಬ್ರಹ್ಮಣ್ಯ ಎನ್ಕೌಂಟರ್ನಲ್ಲಿ ರಾಯಚೂರಿನ ಎಲ್ಲಪ್ಪ ಮೃತಪಟ್ಟ.
ಮೆಣಸಿನಹಾಡ್ಯ ಕಾಡು ಪ್ರದೇಶದಲ್ಲಿ ಹಾರಾಟವಾದ ಗುಂಡು ಅಲ್ಲಿನ ನಿವಾಸಿ ಚಿರಾಮ್ಮ ಎಂಬವರ ಕಾಲಿಗೆ ತಗುಲಿ ಈ ವಿಚಾರ ಬಯಲಿಗೆ ಬಂದಾಗಲೇ ಪಶ್ಚಿಮಘಟ್ಟದಲ್ಲಿ ನಕ್ಸಲೀಯರು ಬೀಡುಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೆ ಕಾರ್ಕದ ಈದು ಬೊಲ್ಲೊಟ್ಟಿನಲ್ಲಿ ಪೊಲೀಸರು ನಡೆಸಿದ ಎನ್ಕೌಂಟರಿಗೆ ಇಬ್ಬರು ಯುವತಿಯರು ಬಲಿಯಾಗಿರುವುದು ನಕ್ಸಲ್ ಚಟುವಟಿಕೆಗೆ ಇನ್ನಷ್ಟು ಪುಷ್ಠಿದೊರೆದಿತ್ತು.
ಇನ್ನು ರಾಜ್ಯದ 15 ಕಡೆಗಳಲ್ಲಿ ನಕ್ಸಲ್ ನಿಗ್ರಹ ದಳದ ಕ್ಯಾಂಪ್ಗಳಿದ್ದು, ಅಹೋರಾತ್ರಿ ಕಾರ್ಯಾಚರಣೆ, ಮಾಹಿತಿ ಸಂಗ್ರಹ ಕಾರ್ಯ ಮುಂದುವರಿದಿದೆ. ಪ್ರಸಕ್ತ ಈ ಭಾಗದಲ್ಲಿ ಎಂಟು ನಕ್ಸಲೀಯರು ಸಕ್ರಿಯರಾಗಿದ್ದಾರೆ. ಶರಣಾಗತಿಗೆ ಮೊದಲ ಆದ್ಯತೆ. ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದರೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಆರ್ಥಿಕ ನೆರವು, ವಸತಿ, ಉದ್ಯೋಗ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಪ್ರಕಾಶ್ ನಿಕಮ್, ಎಎನ್ಎಫ್ ಎಸ್ಪಿ ತಿಳಿಸಿದ್ದಾರೆ.