ಮಂಗಳೂರು, ಡಿ.22 (DaijiworldNews/HR): ಇಷ್ಟರವರೆಗೆ ಬಲವಂತ, ಆಮಿಷ ಆಸೆಯೊಡ್ಡಿ ಅನೇಕ ಮುಗ್ಧ ಜನರನ್ನು ವಿಶೇಷವಾಗಿ ಹಿಂದೂಗಳನ್ನು ಮತಾಂತರ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಬಹುನಿರೀಕ್ಷಿತ ಮತಾಂತರ ಮಸೂದೆ ಮಂಡಿಸಿದ್ದು, ಈ ಕಾಯ್ದೆ ಮಂಡಿಸಿದ ಬೊಮ್ಮಾಯಿ ಸರ್ಕಾರಕ್ಕೆ ದಕ ಜಿಲ್ಲಾ ಬಿಜೆಪಿ ಅಭಿನಂದಿಸುತ್ತೆ" ಎಂದರು.
ಇಷ್ಟರವರೆಗೆ ಬಲವಂತ, ಆಮಿಷ ಆಸೆಯೊಡ್ಡಿ ಅನೇಕ ಮುಗ್ಧ ಜನರನ್ನು ವಿಶೇಷವಾಗಿ ಹಿಂದೂಗಳನ್ನು ಮತಾಂತರ ಮಾಡಲಾಗಿದ್ದು, ಕೇವಲ ಒಂದು ಸಾವಿರ ಎರಡು ಸಾವಿರ ರೂಪಾಯಿ, ಐನೂರು ರೂಪಾಯಿ ಮಾತ್ರೆ ನೀಡಿ. ಅದರಿಂದ ಕಾಯಿಲೆ ಗುಣ ಆಗುತ್ತೆ ಹೇಳಿ. ಅನೇಕ ಸುಳ್ಳು ಕಾರಣಗಳ್ನು ಹೇಳಿ ಬಡತನದ ದುರುಪಯೋಗ ಪಡಿಸಿ. ಅನೇಕ ಮತಾಂತರದ ಮಿಷನರಿಗಳು ಅತೀ ಬಡವ ಹಿಂದುಗಳನ್ನು ಮತಾಂತರ ಮಾಡುತ್ತಿದ್ದರು" ಎಂದು ಆರೋಪಿಸಿದ್ದಾರೆ.
ಇನ್ನು "ನಾವೆಲ್ಲ ನೋಡಿದ್ದೇವೆ ಅಲೆಲೂಯ ಅಲೆಲೂಯ ಎಂದು ಬೊಬ್ಬೆ ಹಾಕಿಕೊಂಡು. ಕಣ್ಣಿದವನಿಗೆ ಕಣ್ಣು ಬರುತ್ತೇ..! ಕಾಲಿಲ್ಲದವನಿಗೆ ಕಾಲು ಬರುತ್ತೆ! ಎನ್ನುವ ಮೋಸದ ವಂಚನೆ ಆಟ ಆಡಿ. ಅನೇಕ ಜನ ಮುಗ್ಧ ಹಿಂದೂಗಳನ್ನು ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡುವ ಒಂದು ಧಂದೆಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ" ಎಂದು ಹೇಳಿದ್ದಾರೆ.