ಮಂಗಳೂರು, ಡಿ.21 (DaijiworldNews/HR): ಕಥೊಲಿಕ್ ಸಭಾ ಬೊಂದೆಲ್ ಘಟಕ ಹಾಗೂ ಅಂತರ್ ಧರ್ಮೀಯ ಸಂವಾದ ಆಯೋಗ ಬೋಂದೆಲ್ ಚರ್ಚ್ ಹಾಲ್ನಲ್ಲಿ ಏರ್ಪಡಿಸಿದ್ದ ಕ್ರಿಸ್ಮಸ್ ಸೌಹಾರ್ದ ಕೂಟವನ್ನು ಉದ್ಘಾಟಿಸಿ ಪಚ್ಚನಾಡಿ ಕಾರ್ಪೊರೇಟರ್ ಹಿತನುಡಿಗಳನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಂ.ಜಿ ಹೆಗಡೆ, ರೆಹಮಾನ್ ಖಾನ್, ಶ್ರೀ ವಾಲ್ಟರ್ ನಂದಳಿಕೆ ಇವರು ತಮ್ಮ ಸಂದೇಶಗಳನ್ನು ನೀಡಿದರು.
ಕ್ರಿಸ್ಮಸ್ ಹಬ್ಬವು ಶಾಂತಿಯ ಸಂಕೇತ. ನಾವು ಪರರನ್ನು ಪ್ರೀತಿಸಿದಾಗ ಮಾತ್ರ ಹಬ್ಬಗಳ ಸಂಭ್ರಮಾಚರಣೆಯಾಗುತ್ತದೆ. ದೇವರು ನಮಗೆ ಎಲ್ಲರನ್ನೂ ಪ್ರೀತಿಸಲು ಕರೆ ನೀಡಿದ್ದಾರೆ. ಇದರ ಪ್ರಕಾರ ನಾವೂ ನಡೆದರೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬಹುದು. ಎಲ್ಲಾ ಧರ್ಮಗಳಲ್ಲಿಯೂ ಬೆರಳೆಣಿಕೆಯಷ್ಟು ಜನರು ತಮ್ಮದೇ ಧರ್ಮದ ಬಗ್ಗೆ ಮಾತನಾಡುತ್ತಾರೆ. ಅವರಿಂದ ಮೌನವಾಗಿರುವ ಇತರರ
ಮೇಲೆ ಪರಿಣಾಮ ಬೀರುತ್ತದೆ. ಸಮಾಜದ ಸುದಾರಣೆಗೆ ತೊಡಕಾಗುತ್ತದೆ. ಹಾಗೂ ಶಾಂತಿಯ ನೆಲೆಗೆ ಭಂಗವಾಗುತ್ತದೆ ಎಂಬ ಸಂದೇಶ ನೀಡಿದರು.
ಪೀಟರ್ ಗೊನ್ಸಾಲ್ವಿಸ್ ಮಾತನಾಡಿ, ಯೇಸು ಕ್ರಿಸ್ತರು ಎಲ್ಲರನ್ನೂ ಪ್ರೀತಿಸಿ ನೆಲೆಸಿದ ಶಾಂತಿಯು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಪಸರಿಸಲಿ ಎಂದು ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಆಂಡ್ರು ಲಿಯೋ ಡಿಸೋಜ ಮಾತನಾಡಿ, "ದೇವರು ಒಂದೇ ಭಾಷೆಯಲ್ಲಿ ಮಾತನಾಡುತ್ತಾರೆ ಅದೇ ಶಾಂತಿ ಹಾಗೂ ಸಹ ಬಾಳ್ವೆಯ ಭಾಷೆ. ನಾವು ಯಾವುದೇ ಧರ್ಮದಲ್ಲಿದ್ದರೂ ನಮ್ಮ ಧರ್ಮದಲ್ಲಿ ಜೀವಿಸಿ ಇತರ ಧರ್ಮವನ್ನು ಗೌರವಿಸುವುದು ಸೌಹಾರ್ದ ಅಥವಾ ಬಂದುತ್ವ ವಾಗಿದೆ" ಎಂದರು.
ಕಥೊಲಿಕ್ ಸಭಾ ಅಧ್ಯಕ್ಷ ಸ್ಟೀಫನ್ ಡಿಸಿಲ್ವಾ ಸ್ವಾಗತಿಸಿ, ನೀರಲ್ ವಾಜ್ ವಂದಿಸಿದರು. ಮನೋಹರ್ ಕೊನ್ಸೆಸೊ ಕಾರ್ಯಕ್ರಮ ನಿರ್ವಹಿಸಿದರು.