ಉಡುಪಿ, ಡಿ.20 (DaijiworldNews/SM): ಜಿಲ್ಲೆಯಲ್ಲಿ ಎರಡು ಒಮಿಕ್ರಾನ್ ಕೇಸ್ ಪತ್ತೆಯಾಗಿದ್ದು, ಈ ಪೈಕಿ ಒಬ್ಬರು ಕ್ಯಾನ್ಸರ್ ಪೀಡಿತರರಾಗಿದ್ದಾರೆ. ಆದರೆ, ಅವರ ಅರೋಗ್ಯ ಬಿಗಡಾಯಿಸಿಲ್ಲ. ಇಬ್ಬರೂ ಕೂಡ ಸಂಪೂರ್ಣ ಆರೋಗ್ಯಕರವಾಗಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇಬ್ಬರಿಗೂ ಎರಡು ಡೋಸ್ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಆಗಿದೆ. ಲಸಿಕೆ ತೆಗೆದುಕೊಂಡ ಕಾರಣ ಯಾವುದೇ ದುಷ್ಪರಿಣಾಮ ಆಗಿಲ್ಲ. ಪ್ರಾಥಮಿಕ ಸಂಪರ್ಕದಲ್ಲಿ ಯಾರಿಗೂ ಪಾಸಿಟಿವ್ ಇಲ್ಲ. ಸುತ್ತಮುತ್ತ ನಡೆಸಿದ ಎರಡು ಸಾವಿರ ಟೆಸ್ಟ್ ರಿಪೋರ್ಟ್ ನೆಗೆಟಿವ್ ಇದೆ ಎಂದ ಅವರು ಓಮಿಕ್ರಾನ್ ಬಗ್ಗೆ ಭಯ ಬೇಡ ಬದಲಾಗಿ ಎಚ್ಚರವಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.