ಬಂಟ್ವಾಳ, ಡಿ.19 (DaijiworldNews/HR): ಸಾಲದ ಬಾಧೆ ಎಂದು ಡೆತ್ ನೋಟು ಬರೆದು ಉದ್ಯಮಿಯೋರ್ವರು ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕನಪಾದೆ ನಿವಾಸಿ ಕೃಷ್ಣ ಟಿ. ಎಂದು ಗುರುತಿಸಲಾಗಿದೆ.
ಬಿಸಿರೋಡಿನ ಖಾಸಗಿ ಹೋಟೆಲ್ ನ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಐಸ್ ಕ್ರೀಂ ಒಂದರ ಮಾಲಕರಾಗಿದ್ದು ಜೊತೆಗೆ ಕ್ಲಬ್ ಕೂಡಾ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಉದ್ಯಮದಲ್ಲಿ ನಷ್ಟವಾಗಿದ್ದು, ಸಾಲದಬಾಧೆಯಿಂದ ಬಳಲುತ್ತಿದ್ದರು ಎಂಬ ಕಾರಣವನ್ನು ಡೆತ್ ನೋಟಿನಲ್ಲಿ ಬರೆದು ಕಿಸೆಯಲ್ಲಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್ಐ.ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.