ಮಂಗಳೂರು, ಡಿ.19 (DaijiworldNews/HR): ಕಳೆದ ವರ್ಷ ಮೃತಪಟ್ಟ ಪೂರ್ಣಿಮ ಕಾಮತ್ ಅವರ ಪುತ್ರಿ ವಿಶೇಷ ಸಾಮರ್ಥ್ಯದ ಸಂಗೀತ ವಿದ್ವಾಂಸಕಿ, ರಾಜ್ಯ ಪ್ರಶಸ್ತಿ ವಿಜೇತೆ ದಿವಂಗತ ಕಸ್ತೂರಿ ಅವರ ನೆನಪಿಗಾಗಿ ಕದ್ರಿ ಉತ್ತರ 32 ವಾರ್ಡಿನ ಬಿಕರ್ನಕಟ್ಟೆ ಕಂಡೆಟ್ಟು ಬಳಿಯಿರುವ ರಸ್ತೆಗೆ ಕಸ್ತೂರಿ ರಸ್ತೆಯೆಂದು ನಾಮಫಲಕ ಉದ್ಘಾಟಿಸಲಾಯಿತು.
ಈ ವೇಳೆ ಜನಪ್ರತಿನಿಧಿ ಶಕೀಲಾ, ಕರ್ನಾಟಕ ರಾಜ್ಯ ನಾಮನಿರ್ದೇಶಿತ ಸದಸ್ಯ ರಮೇಶ್ ಕಂಡೆಟ್ಟು, ಶಕ್ತಿಕೇಂದ್ರ ಅಧ್ಯಕ್ಷ ಪ್ರಸನ್ನ, ಬೂತ್ ಅಧ್ಯಕ್ಷ ಚರಣ್, ಬೂತ್ ಕಾರ್ಯದರ್ಶಿ ಸಂತೋಶ್ ನಂತೂರು, ಮಹಿಳಾ ಮೋರ್ಚಾದ ಸದಸ್ಯರಾದ ಕಮಲಾಕ್ಷಿ, ಶಿಲ್ಪಾ ಗಣೇಶ್, ಭಾರತಿ ಕಂಡೆಟ್ಟು, ಉಮಾ ಕಂಡೆಟ್ಟು, ನಿಶಿತಾ ನಂತೂರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ದೃಷ್ಟಿಹೀನರಾಗದ್ದ ಕಸ್ತೂರಿಯವರ ಸಾಧನೆ ಅಪಾರವಾಗಿದ್ದು, 2009ರಲ್ಲಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ವಿಭಿನ್ನ ಸಾಮರ್ಥ್ಯದ ಸಂಗೀತ ಪ್ರಶಸ್ತಿ ಪಡೆದಿದ್ದು, ಕಿತ್ತೂರು ಚೆನ್ನಮ್ಮ, ಹೆಲೆನ್ ಕೆಲ್ಲರ್ ಡೆ ವಿಶ್ವ ಮಹಿಳಾ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.