ಕಾರ್ಕಳ, ಡಿ.19 (Daijiworld/PY): ಕಾರ್ಕಳದ ಮಿಯ್ಯಾರಿನಲ್ಲಿ ನಡೆದ ಲವ-ಕುಶ ಜೋಡುಕೆರೆ ಕಂಬಳ ಕೂಟ ಸಂಪನ್ನವಾಗಿದೆ.
ಡಿ.18ರ ಶನಿವಾರ ಬೆಳಗ್ಗೆ ಇಂಧನ ಸಚಿವ ವಿ ಸುನಿಲ್ ಕುಮಾರ್, ಮಿಯ್ಯರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್ ಅವರಿಂದ ಉದ್ಘಾಟನೆಗೊಂಡ 18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕೆರೆ ಕಂಬಳ ಭಾನುವಾರ ಬೆಳಗ್ಗೆ ಅಂತ್ಯವಾಯಿತು.
ಈ ಬಾರಿಯ ಕಂಬಳದಲ್ಲಿ 177 ಜೊತೆ ಕೋಣಗಳು ಪಾಲ್ಗೊಂಡಿದ್ದವು. ಕನೆಹಲಗೆ ವಿಭಾಗದಲ್ಲಿ 5, ಅಡ್ಡಹಲಗೆ ವಿಭಾಗದಲ್ಲಿ 7, ಹಗ್ಗ ಹಿರಿಯ ವಿಭಾಗದಲ್ಲಿ 16, ನೇಗಿಲು ಹಿರಿಯ ವಿಭಾಗದಲ್ಲಿ 39, ಹಗ್ಗ ಕಿರಿಯ ವಿಭಾಗದಲ್ಲಿ 25 ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ 85 ಕೊತೆ ಕೋಣಗಳು ಭಾಗವಹಿಸಿದ್ದವು.
ಫಲಿತಾಂಶ:
ಕನಹಲಗೆ
ಪ್ರಥಮ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವಾ (ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ್ ದೇವಾಡಿಗ)
ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ (ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ)
ಹಗ್ಗ ಹಿರಿಯ
ಪ್ರಥಮ: ಪದವು ಕಾನಡ್ಕ ಪ್ಲೇವಿ ಡಿಸೋಜಾ ಎ ( ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ದ್ವಿತೀಯ: ಪದವು ಕಾನಡ್ಕ ಪ್ಲೇವಿ ಡಿಸೋಜಾ ಬಿ ( ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ಹಗ್ಗ ಕಿರಿಯ
ಪ್ರಥಮ: ನೂಜಿಪಾಡಿ ಪ್ರಣಮ್ ಕುಮಾರ್ (ಓಡಿಸಿದವರು: ಪಣಪೀಲು ಪ್ರವೀಣ್ ಕೋಟ್ಯಾನ್)
ದ್ವಿತೀಯ: ಅಲ್ಲಿಪಾದೆ ಕೇದಗೆ ದೇವಸ್ಯ ವಿಜಯ ವಿ. ಕೋಟ್ಯಾನ್ (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ)
ಅಡ್ಡ ಹಲಗೆ
ಪ್ರಥಮ: ನಾರಾವಿ ರಕ್ಷೀತ್ ಯುವರಾಜ್ ಜೈನ್ (ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್ )
ದ್ವಿತೀಯ: ಬೋಳಾರ ತ್ರಿಶಾಲ್ ಪೂಜಾರಿ (ಸಾವ್ಯ ಗಂಗಯ್ಯ ಪೂಜಾರಿ)
ನೇಗಿಲು ಹಿರಿಯ
ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ ಬಿ ( ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ: ಶಿರ್ಲಾಲು ನಡಿಬೆಟ್ಟು ಪದ್ಮರಾಜ್ ಹೆಗ್ಡೆ (ಓಡಿಸಿದವರು: ಬಂಬ್ರಾಣಬೈಲು ವಂದೀತ್ ಶೆಟ್ಟಿ)
ನೇಗಿಲು ಕಿರಿಯ
ಪ್ರಥಮ: ನಿಂಜೂರು ಮಾಳಿಗೆ ಮನೆ ಸುರೇಂದ್ರ ಹೆಗ್ಡೆ (ಓಡಿಸಿದವರು: ಎರಿಂಜೆ ಪ್ರಮೋದ್ ಕೋಟ್ಯಾನ್)
ದ್ವಿತೀಯ: ಬೈಂದೂರು ತಗ್ಗರ್ಸೆ ನೀಲಕಂಠ ಹುದಾರ್ (ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್)