ಬೆಳ್ತಂಗಡಿ, ಡಿ 17 (DaijiworldNews/MS): ತಾಲೂಕಿನ ಕುವೆಟ್ಟು ಗ್ರಾಮದ ಕೊಂಕೋಡಿಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಕುವೆಟ್ಟುವಿನ ಕೊಂಕೋಡಿಯ ನಿವಾಸಿ ಸಿರಿಲ್ ಪಿಂಟೋ ಎಂದು ಗುರುತಿಸಲಾಗಿದೆ. ಡಿ.14ರಂದು ರಾತ್ರಿ ಅಮಲು ಪದಾರ್ಥ ಸೇವಿಸಿ ತನ್ನ ಸಹೋದರ ಮರದ ದೊಣ್ಣೆಯಿಂದ ಥಳಿಸಿ ತಲೆ ಹಾಗೂ ಕೈಗಳಿಗೆ ಗಂಭೀರ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಅವರು ಗುರುವಾಯನಕೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಡಿಸೆಂಬರ್ 15 ರಂದು, ಆರೋಪಿ ಸಿರಿಲ್ ಅವರ ತಾಯಿ ಫೆಲ್ಸಿ ಮೋನಿಸ್ ಮತ್ತು ಅವರ ಗಾಯಗೊಂಡು ಮಲಗಿದ್ದಸಹೋದರ ಹೆನ್ರಿ ಪಿಂಟೊ ಅವರ ಮೇಲೆ ಕತ್ತಿ ಯಿಂದ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆದೊಯ್ದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತುಆರೋಪಿಯ ಮತ್ತೋರ್ವ ಸಹೋದರ ಜಾನ್ ಪಿಂಟೋ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.