ಉಡುಪಿ, ಡಿ.15 (DaijiworldNews/HR): ಕ್ರಿಸ್ಮಸ್ ಹಬ್ಬದ ಅಂಗವಾಗಿ ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ ಪ್ರೈಸಸ್ ಮತ್ತು ಉಜ್ವಾಡ್ ಕೊಂಕಣಿ ಪಾಕ್ಷಿಕ ಜಂಟಿಯಾಗಿ "ಗೋದಲಿ ಸಡಗರ" ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ.
ಗೋದಲಿಯನ್ನು ರಚಿಸುವುದು ಕ್ರಿಸ್ಮಸ್ ಸಂಭ್ರಮದ ಅವಿಭಾಜ್ಯ ಅಂಗವಾಗಿದ್ದು, ಕ್ರೈಸ್ತ ಭಾಂಧವರು ತಮ್ಮ ಮನೆ, ಚರ್ಚ್ ಗಳಲ್ಲಿ ವಿವಿಧ ಮಾದರಿಯ ಗೋದಲಿಗಳನ್ನು ನಿರ್ಮಿಸಿ ಸಂಭ್ರಮಿಸುತ್ತಾರೆ. ಈ ಸಂಪ್ರದಾಯವನ್ನು ಪೋಷಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ದಾಯ್ಜಿವಲ್ಡ್ ಉಡುಪಿ ಯು ಸತತವಾಗಿ ನಾಲ್ಕನೇ ಬಾರಿಗೆ ಗೋದಲಿ ಸಡಗರ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧೆಯು ವೈಯುಕ್ತಿಕ ಮತ್ತು ಗುಂಪು ವಿಭಾಗಗಳಲ್ಲಿ ನಡೆಯಲಿದೆ, ಎರಡೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು 3 ಸಮಧಾನಕರ ಬಹುಮಾನಗಳು ಕೂಡಾ ಲಭಿಸಲಿವೆ.
ತನಿಷ್ಕ್ ಉಡುಪಿ, ವಲ್ಡ್ ಆಫ್ ಟೈಟನ್ ಉಡುಪಿ, ಟೈಟನ್ ಐ ಪ್ಲಸ್, ಮತ್ತು ಕಾಟನ್ ಕಿಂಗ್ ಮಳಿಗೆಗಳ ಪ್ರಾಯೋಜಕತ್ವದಲ್ಲಿ ಸ್ಪರ್ಧೆಯು ನಡೆಯಲಿದೆ.
ಆಸಕ್ತರು ಡಿಸೆಂಬರ್ 30, 2021 ರ ಒಳಗಾಗಿ ಛಾಯಾಚಿತ್ರಗಳನ್ನು ಕಳುಹಿಸುವುದು.
ನಿಯಮಗಳು ಹಾಗೂ ಷರತ್ತುಗಳು :
1. ವಾಟರ್ಮಾರ್ಕ್ ಬಳಸಿರುವ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
2. ಛಾಯಾಚಿತ್ರಗಳು ಸ್ಪಷ್ಟವಾಗಿದ್ದು, 1920X1080 ಪಿಕ್ಸೆಲ್ಸ್ ಇರತಕ್ಕದ್ದು.
3. ಸ್ಪರ್ಧೆಯು ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಜರುಗಲಿದೆ.
4. ವೈಯಕ್ತಿಕ ವಿಭಾಗ (ಮನೆ) , ತಂಡ ವಿಭಾಗ ( ಚರ್ಚ್/ ಸಂಘ / ಸಂಸ್ಥೆ/ ವಾಳೆ)
5. ಗರಿಷ್ಠ 4 ಛಾಯಾಚಿತ್ರಗಳನ್ನು (Day & Night) ಮತ್ತು 2 ನಿಮಿಷದ ಗೋದಲಿಯ ವೀಡಿಯೋ ಕಳುಹಿಸಿ.
6. ಗೋದಲಿಯೊಂದಿಗೆ ವೈಯಕ್ತಿಕ/ ತಂಡದ ಒಂದು ಛಾಯಾಚಿತ್ರ ಇರತಕ್ಕದ್ದು.
7. ಛಾಯಾಚಿತ್ರಗಳೊಂದಿಗೆ ಹೆಸರು/ತಂಡದ ಹೆಸರು, ಊರಿನ ಹೆಸರು, ಸರಿಯಾದ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇರತಕ್ಕದ್ದು.
8. ತೀರ್ಪುಗಾರರ ನಿರ್ಣಯವೇ ಅಂತಿಮ.
9. ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ ಡಿಸೆಂಬರ್ 30, 2020
ಪ್ರತೀ ವಿಭಾಗಕ್ಕೆ ಆಕರ್ಷಕ ಬಹುಮಾನಗಳು
ವೈಯಕ್ತಿಕ ವಿಭಾಗ
ಪ್ರಥಮ : 5,000 ರೂ. + ಫಲಕ + ಪ್ರಮಾಣಪತ್ರ
ದ್ವಿತೀಯ : 4,000 ರೂ. + ಫಲಕ + ಪ್ರಮಾಣಪತ್ರ
ತೃತೀಯ : 3,000 ರೂ. + ಫಲಕ + ಪ್ರಮಾಣಪತ್ರ
ತಂಡ ವಿಭಾಗ
ಪ್ರಥಮ : 6,000 ರೂ. + ಫಲಕ + ಪ್ರಮಾಣಪತ್ರ
ದ್ವಿತೀಯ : 5,000 ರೂ. + ಫಲಕ + ಪ್ರಮಾಣಪತ್ರ
ತೃತೀಯ : 4,000 ರೂ. + ಫಲಕ + ಪ್ರಮಾಣಪತ್ರ
ಪ್ರತೀ ವಿಭಾಗಕ್ಕೂ 1,000 ರೂಪಾಯಿಗಳನ್ನೊಳಗೊಂಡ 3 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7338637688 / 90