ಮಂಗಳೂರು, ಡಿ 14 (DaijiworldNews/MS): ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮಹಮ್ಮದ್ ರಿಯಾಜ್ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣಾ ಪೊಲೀಸರು , ಸುವಿತ್ ರಂಗಪಾದೆ, ಗಣೆಶ್, ಚೇತನ್, ಪರೀಕ್ಷಿತ್ ಪಡು ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ಡಿಸೆಂಬರ್ 10ರ ಶುಕ್ರವಾರ ಪಡು ಎಂಬಲ್ಲಿ ಕಾರಿನಲ್ಲಿದ್ದ ಸ್ಥಳೀಯ ನಿವಾಸಿಗೆ ಅಬ್ದುಲ್ ರಜಾಕ್ ಗೆ ಕಾರಿನಲ್ಲಿ ಬಂದ ತಂಡ ಚೂರಿ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಪೊಲೀಸ್ ಪರಿಶೀಲನೆ ವೇಳೆ ಅಬ್ದುಲ್ ರಜಾಕ್ ಸಂಬಂಧಿಸಿದ ರಿಟ್ಜ್ ಕಾರಿನಲ್ಲಿ ಮಹಿಳೆ ಧರಿಸುವ ಒಂದು ಜತೆ ಚಪ್ಪಲಿ ಹಾಗೂ ಮಹಿಳೆಗೆ ಸಂಬಂಧಿಸಿದ ಇತರ ವಸ್ತುಗಳು ಪತ್ತೆಯಾಗಿತ್ತು.