ಕಾರ್ಕಳ, ಡಿ. 13 (DaijiworldNews/HR): ನಗರದ ಗೊಮ್ಮಟ್ಟಬೆಟ್ಟದಲ್ಲಿರುವ ಇರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಅಭಿಮುಖವಾಗಿರುವ ಮಾನಸ್ತಂಭದ ಮೇಲೆ ವಿರಾಜಮಾನರಾಗಿರುವ ಶ್ರೀ ವೀರಬ್ರಹ್ಮ ಯಕ್ಷ ದೇವರಿಗೆ ಪಂಚಾಮೃತ ಅಭಿಷೇಕದ ಸಂಭ್ರಮವು ಜರುಗಿತು.
ಶ್ರೀ ಕರ್ನಾಟಕ ಜೈನ ಪುರೋಹಿತ ಸಂಘ(ರಿ) ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಧಾರ್ಮಿಕ ವಿಧಿವಿಧಾನ ಇದಾಗಿದೆ.