ಮಲ್ಪೆ, ಡಿ 13 (DaijiworldNews/MS): ಚಾಲಕ ಸಮೇತ ಆಟೋ ನೀರಿಗೆ ಬಿದ್ದ ಘಟನೆ ಮಲ್ಪೆ ಬಾಪುತೋಟ ಬಳಿ ಬೋಟುಗಳ ತಂಗುದಾಣದಲ್ಲಿ ಡಿ.13 ರ ಸೋಮವಾರ ನಡೆದಿದೆ.
ಸ್ಥಳೀಯ ಚಂದ್ರ ಸುವರ್ಣ ಎಂಬುವರ ಆಟೊ ನೀರಿಗೆ ನಿಯಂತ್ರಣ ಕಳೆದುಕೊಂಡು ಧಕ್ಕೆಯ ನೀರಿಗೆ ಬಿದ್ದಿತ್ತು. ತಕ್ಷಣ ಎಂದಿನಂತೆ ಈಶ್ವರ್ ಮಲ್ಪೆಯವರಿಗೆ ಸುದ್ದಿ ಮುಟ್ಟಿಸಲಾಯಿತು.
ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್ ಮಲ್ಪೆ ಆಟೊ ಚಾಲಕನನ್ನು ರಕ್ಷಿಸಿದ್ದಾರೆ. ಮಾತ್ರವಲ್ಲದೆ ಕ್ರೇನ್ ಮೂಲಕ ಆಟೋವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದಾರೆ. ಮಲ್ಪೆ ಪರಿಸರದ ಆಪತ್ಭಾಂಧವ ಎಂದೇ ಕರೆಸಿಕೊಳ್ಳುವ ಈಶ್ವರ್ ಮಲ್ಪೆ ಅವರ ಈ ಸಕಾಲಿಕ ನೆರವು ಭಾರೀ ಮೆಚ್ಚುಗೆಗೆ ಪಾತ್ರವಾಯಿತು.