ಶಿರ್ಲಾಲು, ಡಿ.12 (DaijiworldNews/SM): ಪೊಲೀಸರನ್ನು ಕಂಡು ಗೋವುಗಳನ್ನು ಕಾರಿನಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ನಡೆದಿದೆ.
ಇಲ್ಲಿನ ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುದರ್ಶನ ದೊಡಮನಿ ರಾತ್ರಿ ರೌಂಡ್ಸ್ ಸಲುವಾಗಿ ಜೀಪು ಚಾಲಕ ಸತೀಶ ರವರೊಂದಿಗೆ ಇಲಾಖಾ ವಾಹನದಲ್ಲಿ ತಡ ರಾತ್ರಿ ಶಿರ್ಲಾಲು ಗ್ರಾಮದ ಗುಡ್ಡೆಯಂಗಡಿ ಬಳಿ ತಲುಪಿದಾಗ ಗುಡ್ಡೆಯಂಗಡಿಯ ತಿರುವಿನ ಬಳಿ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರೊಂದು ನಿಂತುಕೊಂಡಿತ್ತು.
ಪೊಲೀಸರು ಗುಡ್ಡೆಯಂಗಡಿಯ ತಿರುವನ್ನು ತಲುಪುವ ವೇಳೆಗೆ ಓಮ್ನಿ ವಾಹನದ ಸವಾರನು ಒಮ್ಮೆಲೇ ವಾಹನವನ್ನು ಸ್ಟಾರ್ಟ್ಮಾಡಿ ಮುಂದೆ ತರುವಾಗ ಪೊಲೀಸ್ ಉಪನಿರೀಕ್ಷಕ ಸುದರ್ಶನ ದೊಡಮನಿ ರವರು ವಾಹನ ನಿಲ್ಲಿಸಲು ಸೂಚನೆ ಕೊಟ್ಟಿದ್ದು, ಓಮ್ನಿ ಚಾಲಕನು ಕಾರನ್ನು ನಿಲ್ಲಿಸದೇ ಅತೀ ವೇಗದಿಂದ ಅಂಡಾರು ಕಡೆ ಪರಾರಿಯಾಗಿದ್ದಾನೆ.
ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಓಮ್ನಿ ವಾಹನದ ಹಿಂಭಾಗದಲ್ಲಿ ದನಗಳನ್ನು ತುಂಬಿಸಿರುವುದು ಪೊಲೀಸರಿಗೆ ಕಂಡು ಬಂದಿದೆ.