ಮಂಗಳೂರು: ಕುಲಶೇಖರದಲ್ಲಿ ರತ್ನಾಸ್ ವೈನ್ ಗೇಟ್ನ ಹೊಸ ಮಳಿಗೆ ಆರಂಭ
Sun, Dec 12 2021 03:41:07 PM
ಮಂಗಳೂರು, ಡಿ.12 (DaijiworldNews/HR): ನಗರದ ಜನಪ್ರಿಯ ರತ್ನಾಸ್ ವೈನ್ ಗೇಟ್ನ ಹೊಚ್ಚ ಹೊಸ ಮಳಿಗೆಯನ್ನು ಕುಲಶೇಖರದಲ್ಲಿರುವ ವಾಕ್-ಇನ್ ಮ್ಯಾಗ್ನಿಫಿಕಾ ವಾಣಿಜ್ಯ ಮತ್ತು ವಸತಿ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.
ಕಾರ್ಡೆಲ್ನ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಮಳಿಗೆಯನ್ನು ಆಶೀರ್ವದಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, "ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ ಒಂದು ಮಳಿಗೆ ಅಥವಾ ವ್ಯವಹಾರವನ್ನು ಆಶೀರ್ವದಿಸಿದರೆ ಅದರ ಯಶಸ್ಸ ಖಂಡಿತ. ನಾವು ಕೊರೊನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಾಗಾಗಿ ಈ ಕಷ್ಟದ ಸಮಯದಲ್ಲಿ ವ್ಯಾಪಾರವನ್ನು ಬೆಳೆಸುವುದು ಮತ್ತು ಹೊಸದಾಗಿ ಪ್ರಾರಂಭಿಸುವುದು ಸವಾಲಿನ ಸಂಗತಿಯಾಗಿದೆ" ಎಂದರು.
ಇನ್ನು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಹೊಸ ಮಳಿಗೆಯನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ರಮೇಶ್ ನಾಯಕ್ ಅವರನ್ನು ಶ್ಲಾಘಿಸುತ್ತೇನೆ. ಅವರ ಹೊಸ ಉದ್ಯಮಕ್ಕೆ ಶುಭವಾಗಲಿ" ಎಂದು ಹಾರೈಸಿದ್ದಾರೆ.
ರತ್ನಾಸ್ ವೈನ್ ಗೇಟ್ ಮಾಲೀಕ ರಮೇಶ್ ನಾಯಕ್, ಅವರ ಪತ್ನಿ ಸುಚಿತ್ರಾ ನಾಯಕ್, ಮಕ್ಕಳಾದ ಆಶ್ಲೇಷ ರತ್ನ ಮತ್ತು ಅನಘಾ ರತ್ನ, ಸುಧಾಕರ ನಾಯಕ್, ದಯಾನಂದ ನಾಯಕ್ ಮತ್ತು ಸದಾಶಿವರಾವ್ ಉಪಸ್ಥಿತರಿದ್ದರು.
ವಿಳಾಸ
ರತ್ನಾಸ್ ವೈನ್ ಗೇಟ್ ವಾಕ್-ಇನ್ ಮ್ಯಾಗ್ನಿಫಿಕಾ ಕಾರ್ಡೆಲ್ ಚರ್ಚ್ ಹಾಲ್ ಎದುರು, ಕುಲಶೇಖರ್ ಮಂಗಳೂರು