ಕಾಸರಗೋಡು, ಡಿ.11 (DaijiworldNews/HR): ನಗರದ ಸುಲ್ತಾನ್ ಗೋಲ್ಡ್ ಜ್ಯೂವೆಲ್ಲರಿಯಿಂದ ಸುಮಾರು 2.88 ಕೋಟಿ ರೂ.ಗಳ ವಜ್ರಾಭರಣ ದೋಚಿದ ಘಟನೆಗೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯಾಗಿರುವ ಜ್ಯುವೆಲ್ಲರಿ ಉದ್ಯೋಗಿಯ ಸಹೋದರನನ್ನು ಕಾಸರಗೋಡು ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಟ್ವಾಳ ಬಿ.ಸಿ ರೋಡ್ನ ಇಮ್ರಾನ್ ಶಾಫಿ (45) ಬಂಧಿತ ಆರೋಪಿ.
ಈತ ಪ್ರಮುಖ ಆರೋಪಿ ಮುಹಮ್ಮದ್ ಫಾರೂಕ್ನ ಸಹೋದರ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಕಾಸರಗೋಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಲ್ತಾನ್ ಜುವೆಲ್ಲರಿಯ ನಿರ್ದೇಶಕ ಕುಂಬಳೆಯ ಅಬ್ದುಲ್ ರಫೀಕ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಂದರ್ಭದಲ್ಲಿ ಫಾರೂಕ್
ವಜ್ರಾಭರಣವನ್ನು ಸಹೋದರ ಇಮ್ರಾನ್ ಶಾಫಿಗೆ ಒಪ್ಪಿಸಿ ಪರಾರಿಯಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಇಮ್ರಾನ್ ಗಾಗಿ ಶೋಧ ನೆಡೆಸಿದ್ದು, ಬೆಂಗಳೂರಿನಲ್ಲಿರುವ ಬಗ್ಗೆ ಲಭಿಸಿದೆ ಮಾಹಿತಿಯಂತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಸೇರಿ ಐದು ಬ್ಯಾಂಕ್ಗಳಲ್ಲಿ ವಜ್ರಾಭರಣವನ್ನು ಅಡವಿಟ್ಟು ಸುಮಾರು 50 ಲಕ್ಷ ರೂ .ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ವಜ್ರಾಭರಣವನ್ನು ಪೊಲೀಸರು ಶೀಘ್ರ ವಶಪಡಿಸಿಕೊಳ್ಳಲು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಈ ನಡುವೆ ಪ್ರಮುಖ ಆರೋಪಿ ಮುಹಮ್ಮದ್ ಫಾರೂಕ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೊರ ರಾಜ್ಯಗಳಿಗೆ ತನಿಖೆಯನ್ನು ವಿಸ್ತರಿಸಲಾಗಿದೆ.
ಆರೋಪಿ ವಿದೇಶಕ್ಕೆ ಪಲಾಯನ ಗೈದಿರುವ ಸಾಧ್ಯತೆ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಇಮ್ರಾನ್ ಶಾಫಿಯ ಬ್ಯಾಂಕ್ ಖಾತೆಗಳನ್ನು ಈ ಹಿಂದೆ ಪೊಲೀಸರು ಮುಟ್ಟುಗೋಲು ಹಾಕಿದ್ದರು. ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ವಜ್ರಾಭರಣ ವಿಭಾಗದ ಮುಖ್ಯಸ್ಥರಾಗಿದ್ದ ಫಾರೂಕ್ ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಸುಮಾರು 2.88 ಕೋಟಿ ರೂ. ಮೌಲ್ಯದ ವಜ್ರಾಭರಣವನ್ನು ದೋಚಿದ್ದರು. ತಿಂಗಳ ಹಿಂದೆ ಆಡಿಟ್ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿತ್ತು.