ಉಡುಪಿ, ಡಿ.11 (DaijiworldNews/HR): ಮಾನಸಿಕ ಯುವಕನೋರ್ವ ಮಧ್ಯರಾತ್ರಿ ಆದಿ ಉಡುಪಿ ಪರಿಸರದಲ್ಲಿ ಸಾರ್ವಜನಿಕರ ಮನೆಗಳ ಬಾಗಿಲು ಬಡಿದು ಭಯದ ವಾತಾವರಣ ನಿರ್ಮಿಸುವುದರ ಜೊತೆಗೆ ಕಬ್ಬಿಣದ ರಾಡ್ ಹಾಗೂ ಬಾಟಲಿ ಹಿಡಿದು ಸಾರ್ವಜನಿಕ ರಸ್ತೆಯಲ್ಲಿ ಜನರ ಮೇಲೆ ಮುಗಿ ಬೀಳುತ್ತಿದ್ದ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿ, ನಗರ ಠಾಣಾ ಪೊಲೀಸರ ಸಹಾಯದಿಂದ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಯುವಕನ ಹೆಸರು ನಿಂಗರಾಜು(22) ಮೂಲತಃ ಬಳ್ಳಾರಿಯವನು. ಕೂಲಿ ಕೆಲಸಕ್ಕೆ ಉಡುಪಿಗೆ ಬಂದ ಈತ ಆಕಸ್ಮಿಕವಾಗಿ ಮಾನಸಿಕ ರೋಗಿಯಾಗಿದ್ದಾನೆ.
ಇನ್ನು ಯುವಕನ ಬಳ್ಳಾರಿಯ ಸಂಬಂಧಿಕರು ವಿಶು ಶೆಟ್ಟಿಗೆ ಸಂಪರ್ಕಕ್ಕೆ ಸಿಕ್ಕಿದ್ದು ಕೂಡಲೇ ಉಡುಪಿಗೆ ದಾವಿಸುವುದಾಗಿ ತಿಳಿಸಿದ್ದಾರೆ.
ಯುವಕನನ್ನು ವಶಕ್ಕೆ ಪಡೆಯಲು ನಗರ ಠಾಣಾ ಸಿಬ್ಬಂದಿ ಸತೀಶ್ ವಿಶು ಶೆಟ್ಟಿ ಜೊತೆಗೆ ಬಹಳ ಶ್ರಮ ವಹಿಸಿ ಸಹಕರಿಸಿದ್ದಾರೆ.