ಕಾರ್ಕಳ, ಡಿ.11 (DaijiworldNews/PY): ಮದ್ಯವ್ಯಸನಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲ್ಯಾ ಗ್ರಾಮದ ಕುಂಟಾಡಿ ಕೋಂಕೆಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಗಣೇಶ ಪೂಜಾರಿ (35) ಎಂದು ಗುರುತಿಸಲಾಗಿದೆ.
ಗಣೇಶ ಪೂಜಾರಿ ಅವರು ವಿಪರೀತ ಮದ್ಯವ್ಯಸನಿಯಾಗಿದ್ದು, ತನಗೆ ಈ ಜೀವನ ಬೇಡ ತಾನು ಸಾಯುತ್ತೇನೆ ಎಂದ ಆಗಾಗ್ಗೆ ತಿಳಿಸುತ್ತಿದ್ದವರು.
ಡಿ.10ರಂದು ಮನೆಯ ಅಂಗಳದಲ್ಲಿ ಹಾಕಲಾದ ಶೀಟಿನ ಮಾಡಿಗೆ ಹಾಕಲಾದ ಕಬ್ಬಿಣದ ಅಡ್ಡಕ್ಕೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.