ಮಂಗಳೂರು, ಡಿ.10 (DaijiworldNews/SM): ನಗರ ಹೊರ ವಲಯದ ನೀರುಮಾರ್ಗ ಸಮೀಪ ಯುವಕನಿಗೆ ಚೂರಿ ಇರಿತ ನಡೆಸಿರುವ ಘಟನೆ ಡಿಸೆಂಬರ್ 10ರ ಶುಕ್ರವಾರ ರಾತ್ರಿ ನಡೆದಿದೆ.
ನೀರುಮಾರ್ಗದ ಪಡು ಎಂಬಲ್ಲಿ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಅಬ್ದುಲ್ ರಜಾಕ್ ಇರಿತಕ್ಕೊಳಗಾಗಿದ್ದಾರೆ. ಕಾರಿನಲ್ಲಿ ಬಂದ ತಂಡ ಕೃತ್ಯ ಎಸಗಿದೆ ಎಂಬುವುದಾಗಿ ಪ್ರಾಥಮಿಕ ಮೂಲಗಳಿಂದ ಮಾಹಿತಿ ಲಭಿಸಿದೆ.
ಸದ್ಯ ಗಾಯಾಳು ಯುವಕನಿಗೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಯಾವ ಕಾರಣಕ್ಕಾಗಿ ಇರಿತ ನಡೆಸಲಾಗಿದೆ ಎನ್ನುವ ಬಗ್ಗೆಯೂ ಕೂಡ ಇಲ್ಲಿಯ ತನಕ ಮಾಹಿತಿ ಲಭಿಸಿಲ್ಲ.