ಮಂಗಳೂರು, ಡಿ.09 (DaijiworldNews/PY): ಗುರುಪುರ ಸೇತುವೆಗೆ ಹಾರಿ ಯುವಕ ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾದ ಯುವಕನನ್ನು ಯೋಗೀಶ್ ಮೂಡುಶೆಡ್ಡೆ (35) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆಯಿಂದಲೇ ಯುವಕ ನಾಪತ್ತೆಯಾಗಿದ್ದಾನೆ. ಯುವಕನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದ್ದು, ನಿನ್ನೆ ಸಂಜೆಯಿಂದಲೇ ಮನೆಮಂದಿ ಹುಡುಕಾಟ ನಡೆಸಿದ್ದಾರೆ.
ಇಂದು ಗುರುಪುರ ನದಿ ಸೇತುವೆ ಪಕ್ಕ ಬೈಕ್ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ಈ ಹಿನ್ನೆಲೆ ಯುವಕನ ಪತ್ತೆಗಾಗಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಇನ್ನು, ಹೊಳೆಗೆ ಹಾರುವುದನ್ನು ಯಾರೂ ಪ್ರತ್ಯಕ್ಷದರ್ಶಿಗಳು ನೋಡಿಲ್ಲದ ಕಾರಣ, ಈ ಬಗ್ಗೆ ಶಂಕೆ ವ್ಯಕ್ತವಾಗಿದೆ.