ಮಂಗಳೂರು, ಡಿ.06 (DaijiworldNews/SM): ಪೊಲೀಸರನ್ನು ಶ್ವಾನಕ್ಕೆ ಹೋಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ. ಗೃಹ ಸಚಿವರು ಅಸಹಾಯಕತೆ ಮೆರೆದಿದ್ದಾರೆ. ಗ್ರ್ಹ ಇಲಾಖೆಯ ಕೆಲಸ ಆಡಳಿತ ಯಂತ್ರ ಕಾಯ್ದುಕೊಳ್ಳುವುದು. ಪೊಲೀಸ್ ಇಲಾಖೆ ಕಾನೂನನ್ನು ಕಾಪಾಡುತ್ತದೆ. ಅಧಿಕಾರಿ ವರ್ಗದವರಲ್ಲೂ ತುಂಬಾ ಜನ ನಿಷ್ಟಾವಂತ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಆದರೆ, ಪೊಲೀಸ್ ಇಲಾಖೆಯನ್ನೇ ಶ್ವಾನಕ್ಕೆ ಹೋಲಿಸಿರುವುದು ಖಂಡನೀಯ ಎಂದಿದ್ದಾರೆ.
ಗೃಹ ಸಚಿವರಿಗೆ ಶೋಭೆತರಲ್ಲ, ಗೃಹ ಖಾತೆಯ ಸಚಿವರಾಗಿ ಮುಂದುವರಿಯಲು ಅವರು ಅರ್ಹರಲ್ಲ. ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ ಐಪಿಎಸ್ ಅಗಿದ್ದವರ ಪೈಕಿ ಒಳ್ಳೆಯ ಅಧಿಕಾರಿಗಳು ಇದ್ದಾರೆ ಎಂದರು.
ಪೊಲೀಸ್ ಇಲಾಖೆ ವರ್ಗಾವಣೆ ವಿಚಾರದಲ್ಲಿ ದಂಧೆ ನಡೆಯುತ್ತಿದೆ, ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು 40% ಕಮಿಷನ್ ಕೇಳ್ತಾರೆ ಎಂದು ಗುತ್ತಿಗೆದಾರರು ಅರೋಪ ಮಾಡ್ತಿದ್ದಾರೆ. ಅಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ ಎಂದು ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.