ಪುತ್ತೂರು, ಡಿ.06 (DaijiworldNews/SM): ದ.ಕ. ಬಿಜೆಪಿಯ ಭೀಷ್ಮ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್(92) ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ರಾಮ್ ಭಟ್ ವಯೋಸಹಜ ಆನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಜನಸಂಘದ ಪ್ರಭಾವಿ ನಾಯಕರಾಗಿ ರಾಮ ಭಟ್ ಗುರಿತಿಸಿಕೊಂಡಿದ್ದರು. ಪಕ್ಷ ಸಂಘಟನೆಯಲ್ಲಿ ಪ್ರಮುಖರಾಗಿದ್ದರು.
1977, 1983ರಲ್ಲಿ ಗೆದ್ದು ಶಾಸಕರಾಗಿದ್ದರು. 1957ರಲ್ಲಿ ಮೊದಲ ಬಾರಿ ಜನಸಂಘದ ಅಡಿಯಲ್ಲಿ ಸ್ಪರ್ಧಿಸಿದ್ದರು. ಬಳಿಕ 1985ರಲ್ಲಿ ಕೊನೆಯ ಬಾರಿ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿದ್ದರು.