ಮಂಗಳೂರು, ಡಿ.06 (DaijiworldNews/PY): ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾದ ಅಧ್ಯಕ್ಷ, ಸೌದಿ ಅರೇಬಿಯಾದ ಜನಸ್ನೇಹಿ 24×7 ಖ್ಯಾತಿಯ ಸತೀಶ್ ಕುಮಾರ್ ಬಜಾಲ್ ಅವರು ಡಿ.5ರ ಭಾನುವಾರ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿದ್ದು, ದರ್ಶನ ಪಡೆದಿದ್ದಾರೆ.
ಈ ಸಂದರ್ಭ ಸತೀಶ್ ಕುಮಾರ್ ಬಜಾಲ್ ಅವರಿಗೆ ಕ್ಷೇತ್ರದ ವತಿಯಿಂದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್ ಅವರು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು.
ಈ ವೇಳೆ ಹಿಂದೂ ಜಾಗರಣ ವೇದಿಕೆಯ ಮಾಜಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರತ್ ಪದವಿನಂಗಡಿ, ನವಚೇತನ ಸೇವಾ ಬಳಗ ತೋಡಾರ್ ಇದರ ಸಂಸ್ಥಾಪಕ ಅಧ್ಯಕ್ಷ ಸುಕೇಶ್ ಜಿ ಅಂಚನ್, ದ.ಕನ್ನಡ ಜಿಲ್ಲಾ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಧೀರಜ್ ಪೂಜಾರಿ, ಶಾಯಿ ದೀಕ್ಷಿತ್ ಪುತ್ತೂರು, ಬಿಲ್ಲವ ವಾರಿಯರ್ಸ್ನ ಅಡ್ಮಿನ್ ಪುಷ್ಪರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.