ಕಾಸರಗೋಡು, ಡಿ.05 (DaijiworldNews/HR): ವಿವಾಹ ದಿನದಂದೇ ಪೊಲೀಸ್ ಪೇದೆಯಾಗಿರುವ ವರ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಯ್ಯೂರಿನಲ್ಲಿ ನಡೆದಿದೆ.
ಕಯ್ಯೂರ್ ಅಲಂತಟ್ಟಿನ ವಿನೀಶ್ (29) ಮೃತಪಟ್ಟವರು.
ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆಯಾಗಿದ್ದರು. ಇಂದು ವಿವಾಹ ನಡೆಯಬೇಕಿತ್ತು. ಇಂದು ಬೆಳಿಗ್ಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಚಿಮೇನಿ ಠಾಣಾ ಪೊಲೀಸರು ಮಹಜರು ನಡೆಸಿದ್ದು , ಪ್ರಕರಣ ದಾಖಲಿಸಿಕೊಂಡಿದ್ದಾರೆ